‘ಭಾಷಾ ಪ್ರೀತಿಯಿಂದ ಕನ್ನಡ ಬೆಳವಣಿಗೆ’

ಸಿರವಾರ: ‘ಮಾತೃಭಾಷೆ ಮೇಲೆ ಪ್ರತಿಯೊಬ್ಬರಿಗೂ ಪ್ರೀತಿ ಇರಬೇಕು. ಅಂದಾಗ ಮಾತ್ರ ಭಾಷೆ ಮೇಲೆ ಹಿಡಿತ ಸಾಧ್ಯವಾಗುತ್ತದೆ’ ಎಂದು ಮಾಜಿ ಸೈನಿಕ ವಿರುಪಾಕ್ಷಪ್ಪ ಸಾಹುಕಾರ ನಿಲಗಲ್ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್ ವ್ಯಾಮೋಹದಲ್ಲಿ ಮಾತೃಭಾಷೆಯನ್ನೇ ಮರೆಯುವಂತಾಗಿದೆ. ಸಣ್ಣ ಸಣ್ಣ ಶಬ್ದಗಳನ್ನು ಸಹ ಮರೆತಿದ್ದೇವೆ. ನಮ್ಮ ಭಾಷೆ ಮೇಲೆ ಹಿಡಿತವಿದ್ದರೆ ಬೇರೆ ಯಾವ ಭಾಷೆಯನ್ನಾದರೂ ಸಲೀಸಾಗಿ ಕಲಿಯಬಹುದು ಎಂದರು. ಭುವನೇಶ್ವರಿ ಭಾವಚಿತ್ರಕ್ಕೆ ತಹಶೀಲ್ದಾರ್ ವಿಜಯೇಂದ್ರ ಹುಲಿನಾಯಕ ಮಾಲಾರ್ಪಣೆ ಮಾಡಿದರು.
ತಾಲ್ಲೂಕು ಆಡಳಿತದಿಂದ ನೀರಾವರಿ ಇಲಾಖೆ ಕಚೇರಿ ಆವರಣದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ವಿಜಯೇಂದ್ರ ಹುಲಿನಾಯಕ ಧ್ವಜಾರೋಹಣ ನೆರವೇರಿಸಿದರು.
ಸಿಪಿಐ ಗುರುರಾಜ ಕಟ್ಟಿಮನಿ, ಚಂದ್ರು ಕಳಸ, ಟಿ.ಬಸವರಾಜ, ಜೆ.ದೇವರಾಜಗೌಡ, ಶಿವಶರಣಗೌಡ ಲಕ್ಕಂದಿನ್ನಿ, ಡಿ.ಯಮನೂರು, ಕೆ.ರಾಘವೇಂದ್ರ, ಸೂರಿ ದುರುಗಣ್ಣ, ಜ್ಞಾನಮಿತ್ರ, ವೆಂಕಟರೆಡ್ಡಿ ಬಲ್ಕಲ್, ಕೃಷ್ಣ ನಾಯಕ ಸೇರಿದಂತೆ ಶಾಲೆ ಶಿಕ್ಷಕರು, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.