ರಾಯಚೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಶೇ 62.75 ರಷ್ಟು ಮತದಾನವಾಗಿದೆ.
ಒಟ್ಟು 6,084 ಮತಗಳ ಮತದಾರರ ಪೈಕಿ 3,818 ಮತದಾರರು ಹಕ್ಕು ಚಲಾಯಿಸಿದ್ದಾರೆ. ಸಿಂಧನೂರಿನಲ್ಲಿ 616, ಸಿರವಾರದಲ್ಲಿ 293, ಮಾನ್ವಿಯಲ್ಲಿ 703, ಹಿರೇಕೊಟ್ನೆಕಲ್ನಲ್ಲಿ 255, ದೇವದುರ್ಗದಲ್ಲಿ 494, ರಾಯಚೂರಿನಲ್ಲಿ 755, ಮಸ್ಕಿಯಲ್ಲಿ 226 ಹಾಗೂ ಲಿಂಗಸುಗೂರಿನಲ್ಲಿ 476 ಮತಗಳು ಚಲಾವಣೆಯಾಗಿವೆ.
ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದ್ದ ಮತದಾನವು ಸಂಜೆ 4 ಗಂಟೆಗೆ ಮುಕ್ತಾಯವಾಗಿದೆ. ಆಯಾ ಮತಗಟ್ಟೆಗಳಲ್ಲೇ ಮತಗಳ ಎಣಿಕೆ ಪ್ರಾರಂಭವಾಗಿದ್ದು, ಜಿಲ್ಲಾ ಕೇಂದ್ರದಲ್ಲಿ ಮತಗಳ ಎಣಿಕೆ ಮಾಹಿತಿ ಕ್ರೋಢೀಕರಿಸಲಾಗುತ್ತಿದೆ. ಚುನಾವಣೆ ಅಧಿಕಾರಿ ಡಾ.ಹಂಪಣ್ಣ ಸಜ್ಜನ್ ಅವರು ಫಲಿತಾಂಶ ಘೋಷಣೆ ಮಾಡಲಿದ್ದಾರೆ.