ಬಂಧಿತರಿಂದ ಕಾರು, ಮೊಬೈಲ್, ಪಿಸ್ತೂಲ್ ಹಾಗೂ ಕಬ್ಬಿಣದ ರಾಡು ಜಪ್ತಿ ಮಾಡಿಕೊಳ್ಳಲಾಗಿದೆ. ಶರಣಕುಮಾರ್ ಸಹೋದರ ಕೃಷ್ಣಪ್ಪ ಅವರು ಆರೋಪಿಗಳಿಂದ ಕಬ್ಬು ಕಟಾವು ಮಾಡಿಕೊಡುವ ವಾಗ್ದಾನ ನೀಡಿ ಮುಂಗಡ ಪಡೆದಿದ್ದ. ಆದರೆ, ಕಟಾವು ಕಾರ್ಯಕ್ಕೆ ಹೋಗದೆ ಕೈ ಕೊಟ್ಟಿದ್ದರಿಂದ ಆರೋಪಿಗಳು ಗುಂಪು ಮಾಡಿಕೊಂಡು ಬಂದು ಅಪಹರಣ ಮಾಡಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.