ರಾಯಚೂರು: ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ ಡಿಬಿ) ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಯುತ್ತಿದೆ.
ಮಂಡಳಿಯ ಕಾರ್ಯದರ್ಶಿ ಎನ್.ವಿ.ಪ್ರಸಾದ್ ಹಾಜರಿದ್ದು, ವಿವಿಧ ಇಲಾಖೆಗಳಡಿ ನನೆಗುದಿಗೆ ಬಿದ್ದಿರುವ ಕಾಮಗಾರಿಗಳ ವಸ್ತುಸ್ಥಿತಿ ಹಾಗೂ ಅನುದಾನ ವೆಚ್ಚದ ವಿವರ ಪಡೆಯುತ್ತಿದ್ದಾರೆ.
ಕೆಕೆಆರ್ಡಿಬಿ ಅಧ್ಯಕ್ಷರು ಕಲಬುರ್ಗಿ ಹೊರತಾದ ಜಿಲ್ಲೆಯಲ್ಲೂ ಸಭೆ ಮಾಡುತ್ತಿರುವುದು ವಿಶೇಷ.