ರಾಯಚೂರು: ಕೆಪಿಎಸ್ಸಿ ನಡೆಸುತ್ತಿರುವ ಲೋಕೋಪಯೋಗಿ ಇಲಾಖೆಯ ಎಇ ಹುದ್ದೆಗೆ ಪರೀಕ್ಷೆ ಬರೆಯುವುದಕ್ಕೆ ಹೋಗುತ್ತಿದ್ದ ಆಕಾಂಕ್ಷೆಗಳು ರೈಲು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ಪೊಲೀಸರು ಜಮಾವಣೆ ಆಗುತ್ತಿದ್ದಾರೆ.
ಪರೀಕ್ಷೆಗೆ ತೆರಳುವವರು ಮಾತ್ರ ಇರುವಂತೆ ಪೊಲೀಸರು ಸೂಚಿಸುತ್ತಿದ್ದಾರೆ. ನೊಂದಿರುವ ಅಭ್ಯರ್ಥಿಗಳು ಹಾಲ್ ಟಿಕೆಟ್ ಕೈಯಲ್ಲಿ ಹಿಡಿದುಕೊಂಡು ರೈಲ್ವೆ ಹಳಿಯುದ್ದಕ್ಕೂ ಕುಳಿತು ಪ್ರತಿಭಟನೆ ಮುಂದುವರಿಸಿದ್ದಾರೆ.
ಪರೀಕ್ಷೆ ಮುಂದೂಡುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಉದ್ಯೋಗಾಕಾಂಕ್ಷಿಗಳು ಪಟ್ಟು ಹಿಡಿದಿದ್ದಾರೆ.