ಜೆಸಿಟಿಯು ಸದಸ್ಯರು ಬೈಕ್ ರ್ಯಾಲಿ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ನಗರದ ವಿವಿಧೆಡೆ ಸಂಚರಿಸಿ ಬಂದ್ ಬೆಂಬಲಿಸುವಂತೆ ವ್ಯಾಪಾರಿಗಳಿಗೆ ಕೋರಿದರು. ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಆನಂತರ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಧರಣಿ ನಡೆಸಿದರು. ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷೆ ಎಚ್. ಪದ್ಮಾ, ಎಐಟಿಯುಸಿ ಕಾರ್ಯದರ್ಶಿ ಬಾಷುಮಿಯಾ, ಜಿಲ್ಲಾ ಸಂಚಾಲಕ ಎನ್.ಎಸ್. ವೀರೇಶ, ಡಿ.ಎಸ್.ಶರಣಬಸವ, ಎಂ.ರವಿ, ತಿಮ್ಮಪ್ಪಸ್ವಾಮಿ, ಬಸವರಾಜ ಗಾರಲದಿನ್ನಿ ಇದ್ದರು.