ಕಡೂರಿನ ಎಸ್.ಎನ್. ಕೃಷ್ಣಮೂರ್ತಿ ಅವರು ‘ರಾಜಕೀಯ’ ಶಬ್ದವನ್ನು ವಿಶ್ಲೇಷಿಸುವಾಗ ಪುರಾಣಗಳಲ್ಲಿ ಹೆಸರಿಸಲಾದ ರಾಕ್ಷಸರ ಗುಣಸ್ವಭಾವದ ವ್ಯಕ್ತಿಗಳನ್ನು ಉದಾಹರಿಸುತ್ತಾ, ರಾವಣ, ಜರಾಸಂಧ, ಕೀಚಕ ಹಾಗೂ ಯಮ– ಇವರ ಹೆಸರುಗಳನ್ನು ಬಳಸಿಕೊಂಡಿದ್ದಾರೆ (ವಾ.ವಾ., ಮಾ.13). ಈ ನಾಲ್ವರು ವ್ಯಕ್ತಿಗಳಲ್ಲಿ ಮೊದಲಿನ ಮೂವರು ರಾಕ್ಷಸ ಗುಣಸ್ವಭಾವವನ್ನು ಹೊಂದಿದ್ದರು. ಆದರೆ, ನಾಲ್ಕನೆಯವನಾದ ‘ಯಮ’ ರಾಕ್ಷಸನಲ್ಲ ಹಾಗೂ ರಾಕ್ಷಸ ಗುಣಸ್ವಭಾವವನ್ನೂ ಹೊಂದಿಲ್ಲ. ಬದಲಿಗೆ, ಅವನು ಒಬ್ಬ ದೇವತೆ (ಮೃತ್ಯುದೇವತೆ).