ಬಾಬುಗೌಡ ಬಾದರ್ಲಿ ಮಾತನಾಡಿ ‘ನೀರಿನ ವಿಷಯದಲ್ಲಿ ಸುಳ್ಳು ಹೇಳಿ ರೈತರಿಗೆ ಮೋಸ ಮಾಡಿದ ಅಧಿಕಾರಕ್ಕೆ ಬಂದಿರುವ ವೆಂಕಟರಾವ್ ನಾಡಗೌಡ ಅವರನ್ನು ಜೆಡಿಎಸ್ ಕಾರ್ಯಕರ್ತರು ನಂಬುತ್ತಿಲ್ಲ. ಕ್ಷೇತ್ರದ ಜನರ ಆಶೋತ್ತರ, ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸುವಲ್ಲಿ ಸಂಪೂರ್ಣವಾಗಿ ವಿಫಲ ವಾಗಿ ದ್ದಾರೆ. ಮುಂಬರುವ ವಿಧಾನಸಭಾ ಚುನಾವ ಣೆಯಲ್ಲಿ ನಾಡಗೌಡರನ್ನು ಸೋಲಿಸಿ ಜನರು ತಕ್ಕ ಪಾಠ ಕಲಿಸು ವರು‘ ಎಂದು ಹೇಳಿದರು.
ಮುಖಂಡರಾದ ವೀರಭದ್ರಪ್ಪಗೌಡ ಬೆಳ್ಳಿಗನೂರು, ಅಮರೇಗೌಡ ಬೊಮ್ಮ ನಾಳ, ಬಸವರಾಜ ನಿಟ್ಟೂರು, ಶಿವನಗೌಡ ಎಲೆಕೂಡ್ಲಿಗಿ, ಭೀಮರಾಯಗೌಡ ಭಾವಿಕಟ್ಟಿ, ನರ ಸರೆಡ್ಡಿ ಭಾವಿಕಟ್ಟಿ, ಆದನಗೌಡ ಸಾಹು ಕಾರ, ಗ್ರಾ. ಪಂ. ಸದಸ್ಯರಾದ ಬಸನ ಗೌಡ, ಹನುಮಂತ, ಸಾಬಮ್ಮ ಇದ್ದರು.