ಎಲ್ ವಿ ಡಿ ಕಾಲೇಜಿನ ಪ್ರಾಧ್ಯಾಪಕ ಚನ್ನಬಸವಯ್ಯ ಹಿರೇಮಠ ಮಾತನಾಡಿ, ಕವಿ, ಲೇಖಕರಿಗೆ ಸೃಜನಶೀಲತೆ, ವಿಮರ್ಶಾತ್ಮಕ ಹಾಗೂ ನೇರ ನಿಷ್ಠುರರಾಗಿ ಬರೆಯುವ ಎದೆಗಾರಿಕೆ ಇರಬೇಕು. ಬರಹಗಾರರು ಶಿಸ್ತು, ಸಂಯಮ, ತಾಳ್ಮೆ ಇಲ್ಲದಿದ್ದರೆ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಲಾರರು. ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರ ಕೃತಿಯಲ್ಲಿ ಸಾಧಕರ ಕುರಿತ ನೆನಪುಗಳ ಬುತ್ತಿ ಸಾಗುತ್ತದೆ. ಇದು ವಿಶೇಷವಾದ ಅನುಭವ ನೀಡುತ್ತದೆ. ಅವರ ಕೃತಿಗಳಲ್ಲಿ ನಡುಗನ್ನಡ, ಹಳೆ ಗನ್ನಡ ವಿಸ್ತಾರವಿದೆ. ಎರಡನ್ನೂ ಸಮರ್ಥವಾಗಿವೆ ಎಂದು ತಿಳಿಸಿದರು.