ಇದುವರೆಗೂ ರಾಜ್ಯ ಸರ್ಕಾರವು ಮಡಿವಾಳರಿಗೆ, ಸವಿತಾ ಸಮಾಜದವರಿಗೆ, ಆಟೋ, ಟ್ಯಾಕ್ಷಿ ಚಾಲಕರಿಗೆ, ನೇಕಾರರಿಗೆ, ಕಟ್ಟಡ ಕಾರ್ಮಿಕರಿಗೆ, ಚಮ್ಮಾರರಿಗೆ, ಅಕ್ಕಸಾಲಿಗರಿಗೆ ಹಾಗೂ ಟೈಲರ್ಗಳಿಗೆ ಪರಿಹಾರ ನೀಡುವುದಾಗಿ ಘೋಷಿಸಿದೆ. ನೇಕಾರ ವೃತ್ತಿಯವರಿಗೆ ತಲಾ ₹2 ಸಾವಿರ ಮತ್ತು ಕಟ್ಟಡ ಕಾರ್ಮಿಕರಿಗೆ ತಲಾ ₹3 ಸಾವಿರ ಪರಿಹಾರ ಹಾಗೂ ಪರಿಹಾರ ವ್ಯಾಪ್ತಿಗೆ ಒಳಪಡುವ ಇನ್ನುಳಿದ ವೃತ್ತಿಯವರಿಗೆ ತಲಾ ₹5 ಸಾವಿರ ಪರಿಹಾರ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.