ಸಂವಿಧಾನದ ಆಶಯದಂತೆ ಸರ್ವರಿಗೂ ಸಮಾಬಾಳು,ಸಮಾಪಾಲು ಎಂಬ ಆಶಯದಂತೆ ಸರ್ವರಿಗೂ ಮೂಲಸೌಕರ್ಯ ಒದಗಿಸುವ ಜೊತೆಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮಟ್ಟ ಸುಧಾರಣೆಗೆ ಮಾದಿಗ ಸಮಾಜ ಹಾಗೂ ಉಪಜಾತಿಗಳಿಗೆ ಒಳಮೀಸಲಾತಿ ನೀಡಬೇಕಿದೆ. 1997ರ ಅಕ್ಟೋಬರ್ 13 ರಿಂದ ಮಾದಿಗ ಸಮಾಜದ ರಾಷ್ಟ್ರೀಯ ನಾಯಕ ಮಂದಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ಮಾದಿಗ ದಂಡೋರ ಸಮಿತಿ ರಚಿಸಿ ಹೋರಾಟ ಮಾಡುತ್ತಾ ಬಂದಿದೆ. ಇದರ ಪ್ರತಿಫಲವಾಗಿ ಆಂದ್ರಪ್ರದೇಶದ ನ್ಯಾಯಮೂರ್ತಿ ರಾಮಚಂದ್ರ ರಾಜ್ ಆಯೋಗ, ಕೇಂದ್ರ ಉಷ ಮಹೇರ್ ಆಯೋಗ, ತಮಿಳುನಾಡು ಜನಾರ್ಧನ ಆಯೋಗ, ಮಹಾರಾಷ್ಟ್ರ ಲಾಹೋಜಿ ಸಾಲ್ವೆ ಆಯೋಗ, ಉತ್ತರ ಪ್ರದೇಶದ ಹುಕ್ಕುಂ ಸಿಂಗ್ ಆಯೋಗ, ಪಂಜಾಬ್ ಗುರ್ನೋಸಾ ಸಿಂಗ್ ಆಯೋಗಗಳ ಪ್ರತಿ ರಾಜ್ಯದ ವರ್ಗೀಕರಣ ಪ್ರಸ್ತಾವನೆಯನ್ನು ಸಲ್ಲಿಸಿದರೂ 9 ವರ್ಷ ಅಧಿಕಾರದಲ್ಲಿರುವ ಬಿಜೆಪಿಯ ಕೇಂದ್ರ ಸರ್ಕಾರ ನಿರ್ಲಕ್ಷಾ ಮಾಡುತ್ತಾ ಬಂದಿದೆ ಎಂದು ದೂರಿದರು.