<p><strong>ರಾಯಚೂರು</strong>: ಡಾ.ಬಿ.ಆರ್.ಅಂಬೇಡ್ಕರ್ ಅವರು ಸುಧೀರ್ಘ ಹೋರಾಟದ ಮೂಲಕ ದೇಶದಲ್ಲಿರುವ ಅಸ್ಪೃಶ್ಯ ಜಾತಿಗಳನ್ನು ಒಂದುಗೂಡಿಸಿದರು. ಆದರೆ, ಮತಬ್ಯಾಂಕ್ ರಾಜಕೀಯಕ್ಕಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಅಸ್ಪೃಶ್ಯ ಜಾತಿಗಳನ್ನು ವಿಭಜಿಸುತ್ತಿವೆ ಎಂದು ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿಯ ರಾಜ್ಯ ಕಾರ್ಯಾಧ್ಯಕ್ಷ ಮಹೇಂದ್ರಕುಮಾರ ಮಿತ್ರ ಆರೋಪಿಸಿದರು.</p><p>ರಾಜಕೀಯ ಪಕ್ಷಗಳು ಉದ್ದೇಶ ಪೂರ್ವಕವಾಗಿಯೇ ಅಸ್ಪೃಶ್ಯ ಸಮುದಾಯಗಳನ್ನು ಬಲಗೈ ಹಾಗೂ ಎಡಗೈ ಎಂದು ಭಾಗಮಾಡಿವೆ. ವಾಸ್ತವದಲ್ಲಿ ಎಡಗೈ ಹಾಗೂ ಬಲಗೈ ಎನ್ನುವುದೇ ಇಲ್ಲ ಎಂದು ನಗರದಲ್ಲಿ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.</p><p>ನಿಜವಾದ ಅಸ್ಪೃಶ್ಯರಿಗೆ ವಿಶೇಷವಾಗಿ ಮಾದಿಗರಿಗೆ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಲಾಭ ದೊರಕಬೇಕಾದರೆ ಲಂಬಾಣಿ, ವಡ್ಡರ್, ಕೊರಚ ಹಾಗೂ ಕೊರಮ ಜಾತಿಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ಹೊರಹಾಕಬೇಕು ಎಂದು ಒತ್ತಾಯಿಸಿದರು.</p><p>ಹಳೆಯ ಮೀಸಲಾತಿ ಪದ್ಧತಿ ಮುಂದುವರಿಯಬೇಕು. ಅದರಲ್ಲೇ ಅಸ್ಪೃಶ್ಯ ಜಾತಿಗಳಿಗೆ ಒಳ ಮೀಸಲಾತಿ ಒದಗಿಸಬೇಕು. ಅಸ್ಪೃಶ್ಯರಲ್ಲದ ಜಾತಿಗಳನ್ನು ಪರಿಶಿಷ್ಟರ ಪಟ್ಟಿಯಲ್ಲಿ ಸೇರಿಸಿರುವ ಕಾರಣ ಸಮಸ್ಯೆ ಉಲ್ಬಣಗೊಂಡಿದೆ. ಮಾದಿಗ ದಂಡೋಡ ಸಮುದಾಯದ ಮುಖಂಡರು ವಾಸ್ತವ ಅಂಶಗಳನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.</p><p>ಮಾದಿಗ ಸಮುದಾಯದವರು ವರ್ಗೀಕರಣಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹಾಕಿದಕ್ಕಾಗಿ ಮಾರ್ಚ್ 27ರಂದು ಮುಖ್ಯಮಂತ್ರಿ ನೇತೃತ್ವದಲ್ಲಿ ಸಂಪುಟ ಸಭೆ ಕರೆಯಲಾಗಿದೆ. ಅಡ್ವೋಕೇಟ್ ಜನರಲ್ ಹೈಕೋರ್ಟ್ಗೆ ಸಲ್ಲಿಸಿರುವ ಮೊಮೊ ಹಿಂಪಡೆಯದೇ ಸಂಚಿವ ಸಂಪುಟದಲ್ಲಿ ಚರ್ಚಿಸಿದರೆ ಯಾವ ಲಾಭವೂ ಆಗದು ಎಂದು ಅಭಿಪ್ರಾಯಪಟ್ಟರು.</p><p>ಒಳ ಮೀಸಲಾತಿ ಜಾರಿಯಾದರೆ ಮಾದಿಗರಿಗೆ ಶೇ 6ರಷ್ಟು ಮೀಸಲಾತಿ ದೊರೆಯಲಿದೆ. ಮಾದಿಗ ಸಮುದಾಯದವರು ಚೆನ್ನಾಗಿ ಅಧ್ಯಯನ ಮಾಡಿ ಪರೀಕ್ಷೆ ಬರೆದರೆ ಶೇಕಡ 15ರಷ್ಟು ಮೀಸಲಾತಿ ಸೌಲಭ್ಯ ಪಡೆಯಲು ಅವಕಾಶ ಇದೆ ಎಂದು ತಿಳಿಸಿದರು.</p><p>ಮಾದಿಗ ಸಮುದಾಯದವರು ಉದ್ಧಾರವಾಗಬೇಕಾದರೆ ಆರ್ಎಸ್ಎಸ್ ಸಂಘಟನೆಯ ವಾದಿರಾಜ್ ಅವರಿಂದ ದೂರವಿರಬೇಕು. ವಾದಿರಾಜ್ ಸಾಮರಸ್ಯ ಅವರು ಲಂಬಾಣಿ, ವಡ್ಡರ್, ಕೊರಚ, ಕೊರಮ ಜಾತಿಗಳ ರಕ್ಷಣೆ ಮಾಡಿ ಮಾದಿಗ ಹೊಲೆಯ ಸಮಾಜದಲ್ಲಿ ವಿಷಯ ಬೀಜ ಬಿತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ಡಾ.ಬಿ.ಆರ್.ಅಂಬೇಡ್ಕರ್ ಅವರು ಸುಧೀರ್ಘ ಹೋರಾಟದ ಮೂಲಕ ದೇಶದಲ್ಲಿರುವ ಅಸ್ಪೃಶ್ಯ ಜಾತಿಗಳನ್ನು ಒಂದುಗೂಡಿಸಿದರು. ಆದರೆ, ಮತಬ್ಯಾಂಕ್ ರಾಜಕೀಯಕ್ಕಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಅಸ್ಪೃಶ್ಯ ಜಾತಿಗಳನ್ನು ವಿಭಜಿಸುತ್ತಿವೆ ಎಂದು ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿಯ ರಾಜ್ಯ ಕಾರ್ಯಾಧ್ಯಕ್ಷ ಮಹೇಂದ್ರಕುಮಾರ ಮಿತ್ರ ಆರೋಪಿಸಿದರು.</p><p>ರಾಜಕೀಯ ಪಕ್ಷಗಳು ಉದ್ದೇಶ ಪೂರ್ವಕವಾಗಿಯೇ ಅಸ್ಪೃಶ್ಯ ಸಮುದಾಯಗಳನ್ನು ಬಲಗೈ ಹಾಗೂ ಎಡಗೈ ಎಂದು ಭಾಗಮಾಡಿವೆ. ವಾಸ್ತವದಲ್ಲಿ ಎಡಗೈ ಹಾಗೂ ಬಲಗೈ ಎನ್ನುವುದೇ ಇಲ್ಲ ಎಂದು ನಗರದಲ್ಲಿ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.</p><p>ನಿಜವಾದ ಅಸ್ಪೃಶ್ಯರಿಗೆ ವಿಶೇಷವಾಗಿ ಮಾದಿಗರಿಗೆ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಲಾಭ ದೊರಕಬೇಕಾದರೆ ಲಂಬಾಣಿ, ವಡ್ಡರ್, ಕೊರಚ ಹಾಗೂ ಕೊರಮ ಜಾತಿಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ಹೊರಹಾಕಬೇಕು ಎಂದು ಒತ್ತಾಯಿಸಿದರು.</p><p>ಹಳೆಯ ಮೀಸಲಾತಿ ಪದ್ಧತಿ ಮುಂದುವರಿಯಬೇಕು. ಅದರಲ್ಲೇ ಅಸ್ಪೃಶ್ಯ ಜಾತಿಗಳಿಗೆ ಒಳ ಮೀಸಲಾತಿ ಒದಗಿಸಬೇಕು. ಅಸ್ಪೃಶ್ಯರಲ್ಲದ ಜಾತಿಗಳನ್ನು ಪರಿಶಿಷ್ಟರ ಪಟ್ಟಿಯಲ್ಲಿ ಸೇರಿಸಿರುವ ಕಾರಣ ಸಮಸ್ಯೆ ಉಲ್ಬಣಗೊಂಡಿದೆ. ಮಾದಿಗ ದಂಡೋಡ ಸಮುದಾಯದ ಮುಖಂಡರು ವಾಸ್ತವ ಅಂಶಗಳನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.</p><p>ಮಾದಿಗ ಸಮುದಾಯದವರು ವರ್ಗೀಕರಣಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹಾಕಿದಕ್ಕಾಗಿ ಮಾರ್ಚ್ 27ರಂದು ಮುಖ್ಯಮಂತ್ರಿ ನೇತೃತ್ವದಲ್ಲಿ ಸಂಪುಟ ಸಭೆ ಕರೆಯಲಾಗಿದೆ. ಅಡ್ವೋಕೇಟ್ ಜನರಲ್ ಹೈಕೋರ್ಟ್ಗೆ ಸಲ್ಲಿಸಿರುವ ಮೊಮೊ ಹಿಂಪಡೆಯದೇ ಸಂಚಿವ ಸಂಪುಟದಲ್ಲಿ ಚರ್ಚಿಸಿದರೆ ಯಾವ ಲಾಭವೂ ಆಗದು ಎಂದು ಅಭಿಪ್ರಾಯಪಟ್ಟರು.</p><p>ಒಳ ಮೀಸಲಾತಿ ಜಾರಿಯಾದರೆ ಮಾದಿಗರಿಗೆ ಶೇ 6ರಷ್ಟು ಮೀಸಲಾತಿ ದೊರೆಯಲಿದೆ. ಮಾದಿಗ ಸಮುದಾಯದವರು ಚೆನ್ನಾಗಿ ಅಧ್ಯಯನ ಮಾಡಿ ಪರೀಕ್ಷೆ ಬರೆದರೆ ಶೇಕಡ 15ರಷ್ಟು ಮೀಸಲಾತಿ ಸೌಲಭ್ಯ ಪಡೆಯಲು ಅವಕಾಶ ಇದೆ ಎಂದು ತಿಳಿಸಿದರು.</p><p>ಮಾದಿಗ ಸಮುದಾಯದವರು ಉದ್ಧಾರವಾಗಬೇಕಾದರೆ ಆರ್ಎಸ್ಎಸ್ ಸಂಘಟನೆಯ ವಾದಿರಾಜ್ ಅವರಿಂದ ದೂರವಿರಬೇಕು. ವಾದಿರಾಜ್ ಸಾಮರಸ್ಯ ಅವರು ಲಂಬಾಣಿ, ವಡ್ಡರ್, ಕೊರಚ, ಕೊರಮ ಜಾತಿಗಳ ರಕ್ಷಣೆ ಮಾಡಿ ಮಾದಿಗ ಹೊಲೆಯ ಸಮಾಜದಲ್ಲಿ ವಿಷಯ ಬೀಜ ಬಿತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>