ಯಾವುದೇ ಪ್ರಸಾದ ವಿತರಣಾ ವ್ಯವಸ್ಥೆಯೂ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಮಂತ್ರಾಲಯದಲ್ಲಿ ರಾಯರ ದರ್ಶನ ಸ್ಥಗಿತ ಮಾಡಲಾಗಿದ್ದು, ಭಕ್ತರು ಬರುವುದನ್ನು ನಿಲ್ಲಿಸಬೇಕು. ತಾವಿರುವ ಸ್ಥಳದಲ್ಲೇ ರಾಯರ ಸ್ಮರಣೆ ಮಾಡುವಂತೆ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಈ ಮೊದಲು ಸೂಚನೆ ನೀಡಿದ್ದರು. ಹಾಗಿದ್ದರೂ ಮಂತ್ರಾಲಯಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿರಲಿಲ್ಲ.