ಯಾರೂ ನೋಡದ ಸ್ಥಳದಲ್ಲಿ ಬಾಳೆಹಣ್ಣು ತಿನ್ನುವಂತೆ ಕನಕದಾಸರಿಗೆ ಅವರ ಗುರುಗಳು ಹೇಳಿದ್ದರು. ಆದರೆ ಕನಕದಾಸರು ಬಾಳೆಹಣ್ಣು ತಿನ್ನಲಿಲ್ಲ. ದೇವರ ಕಣ್ಣು ತಪ್ಪಿಸುವುದಕ್ಕೆ ಆಗುವುದಿಲ್ಲ ಎಂದು ವಾಪಸ್ ನೀಡಿದರು. ದೇವರು ನಮ್ಮನ್ನು ನೋಡುತ್ತಿರುತ್ತಾನೆ ಎನ್ನುವ ಪ್ರಜ್ಞೆ ಇರಬೇಕು ಎಂದು ಹೇಳಿದರು.
1969ರಲ್ಲಿ ಮೊದಲಬಾರಿ ಮಂತ್ರಾಲಯಕ್ಕೆ ಭೇಟಿ ನೀಡಿದ್ದೆ. ಆನಂತರ ಅನೇಕ ಸಲ ಬಂದು ಹೋಗಿದ್ದೇನೆ. ಈಗ ಬಹಳಷ್ಟು ಅಭಿವೃದ್ಧಿ ಆಗಿದೆ. ಪೀಠಾಧಿಪತಿಗಳ ಆಜ್ಞೆ ಅನುಸರಿಸಿ ಈ ಸಲ ಗುರು ವೈಭವೋತ್ಸವದಲ್ಲಿ ಪಾಲ್ಗೊಳ್ಳುವ ಸುಯೋಗ ಒದಗಿದೆ ಎಂದು ತಿಳಿಸಿದರು.