ಬೂತ್ಮಟ್ಟದ ಜವಾಬ್ದಾರಿ ಪಡೆದ ಬಿಜೆಪಿ ಕಾರ್ಯಕರ್ತರು, ತಮ್ಮ ಪರ ಇಲ್ಲ ಎನ್ನುವ ಮತದಾರರನ್ನು ಗುರಿಯಾಗಿಟ್ಟುಕೊಂಡು ಮನಪರಿವರ್ತಿ ಸಲು ಹರಸಾಹಸ ಪಡುತ್ತಿದ್ದಾರೆ. ಸ್ಥಳೀಯ ಕಾರ್ಯಕರ್ತರು, ಅವರೊಂದಿಗೆ ಬೇರೆ ಜಿಲ್ಲೆಗಳಿಂದ ಬಂದಿರುವ ಕಾರ್ಯಕರ್ತರು ಹಾಗೂ ಇವರೆಲ್ಲರಿಗೂ ಮಾರ್ಗದರ್ಶನ ಮಾಡುವುದಕ್ಕೆ ಒಬ್ಬರು ಜನಪ್ರತಿನಿಧಿ ಇದ್ದಾರೆ. ಮತದಾರರನ್ನು ಮತ್ತೆ
ಮತ್ತೆ ಭೇಟಿ ಮಾಡಿ ಮನವಿ ಮಾಡುತ್ತಿದ್ದಾರೆ.