ತುರ್ವಿಹಾಳ (ರಾಯಚೂರು): ‘ಬ್ಯಾಂಕ್ ಖಾತೆ ವಿವರ ಕೊಡಿ, ನಿಮ್ಮ ಖಾತೆಗೆ ಹಣ ಹಾಕುತ್ತೇವೆ. ನಾವು ಬಿಜೆಪಿಯವರಿದ್ದೇವೆ' ಎಂದು ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ತುರ್ವಿಹಾಳ ಸುತ್ತಮುತ್ತ ಗ್ರಾಮಗಳಲ್ಲಿ ಕೇಳುತ್ತಿದ್ದವರನ್ನು ಕಾಂಗ್ರೆಸ್ ಕಾರ್ಯಕರ್ತರು ಕರೆದೊಯ್ದು ತುರ್ವಿಹಾಳ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಗುರುವಾರ ನಡೆದಿದೆ.