ಮಸ್ಕಿ: ರಾಜಸ್ಥಾನದ ಉದಯಪುರದ ಟೇಲರ್ ಕನ್ಹಯ್ಯ ಲಾಲ್ ಅವರ ಕೊಲೆ ಪ್ರಕರಣವನ್ನು ಖಂಡಿಸಿ ಶುಕ್ರವಾರ ಪಟ್ಟಣದಲ್ಲಿ ಹಿಂದೂ ಸಮಾಜದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕನ್ಹಯ್ಯ ಲಾಲ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಹೆದ್ದಾರಿ ಮೇಲೆ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಕೆಲ ಸಮಯ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
ಹಿಂದೂ ಸಮಾಜದ ಮುಖಂಡ ಎನ್.ಶಿವಕುಮಾರ, ಪ್ರಸನ್ನ ಪಾಟೀಲ್, ಅಪ್ಪಾಜಿಗೌಡ, ಅಭಿಜಿತ್ ಪಾಟೀಲ್, ಟೇಲರ್ ಸಂಘದ ಬಾಹರ ಅಲಿ, ಮಲ್ಲಯ್ಯ ಪಗಡೇಕಲ್ ಸೇರಿದಂತೆ ಅನೇಕರು ಮಾತನಾಡಿ, ಘಟನೆಯನ್ನು ಖಂಡಿಸಿದರು.
ಡಾ.ಶಿವಶರಣಪ್ಪ ಇತ್ಲಿ, ಡಾ.ಮಲ್ಲಿಕಾರ್ಜುನ, ಜಿ.ವೆಂಕಟೇಶ ನಾಯಕ, ಮೌನೇಶ ನಾಯಕ, ರಾಕೇಶ ಪಾಟೀಲ್, ವಸಂತಕುಮಾರ, ಸಿದ್ಧಲಿಂಗಯ್ಯ ಸೊಪ್ಪಿಮಠ ಸೇರಿದಂತೆ ಅನೇಕ ಹಿಂದೂ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸರ್ಕಲ್ ಇನ್ಸ್ಪೆಕ್ಟರ್ ಸಂಜೀವ್ ಬಳಿಗಾರ, ಸಬ್ ಇನ್ಸ್ಪೆಕ್ಟರ್ ಸಿದ್ಧರಾಮ, ಪ್ರಕಾಶ ಡಂಬಳ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು.