ಲಾಕ್ಡೌನ್ ಆರಂಭದಲ್ಲಿ ಊಟ, ಉಪಹಾರಕ್ಕೆ ಪರದಾಡುವ ದುಃಸ್ಥಿತಿ ಎದುರಿಸಲಾಗದೆ ಬೆಂಗಳೂರಿನಿಂದ ಸಾವಿರಾರು ಜನರು ಜಿಲ್ಲೆಗೆ ವಾಪಸಾಗಿದ್ದಾರೆ. ಈಗ ಲಾಕ್ಡೌನ್ ಸಡಿಲಿಕೆ ಮಾಡಿ ಕೈಗಾರಿಕೆಗಳು ಹಾಗೂ ಇತರೆಲ್ಲ ಕಾಮಗಾರಿ ಆರಂಭಿಸಲು ಅನುಮತಿ ನೀಡಿದ್ದರಿಂದ, ಕೆಲಸಕ್ಕೆ ಹಾಜರಾಗಲು ಕಾರ್ಮಿಕರನ್ನು ಆಹ್ವಾನಿಸಲಾಗುತ್ತಿದೆ.