ರಾಯಚೂರು: ಜಿಲ್ಲೆ ಬರಗಾಲಕ್ಕೆ ತುತ್ತಾಗಿರುವುದರಿಂದ ವರುಣನ ಕೃಪೆಗಾಗಿ ಬೋಸರಾಜು ಫೌಂಡೇಷನ್ ನೇತೃತ್ವದಲ್ಲಿಶುಕ್ರವಾರ ಹೋಮ ಹವನ ಕಾರ್ಯಕ್ರಮ ನಡೆಯಿತು.
ನಗರದ ಗಾಂಧಿಚೌಕ್ನಲ್ಲಿರುವ ಹನುಮಾನ್ ಮಂದಿರದಲ್ಲಿ ದಸರಾ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಸದ ಬಿ.ವಿ.ನಾಯಕ, ಶಾಸಕ ಬಸನಗೌಡ ದದ್ದಲ ಹಾಗೂ ಮುಖಂಡ ರವಿ ಬೋಸರಾಜು ಅವರು ಹೋಮದಲ್ಲಿ ಪಾಲ್ಗೊಂಡಿದ್ದರು.
ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ನಿಧಿಯಿಂದ ಅಂಗವಿಕಲರಿಗೆ 29 ತ್ರಿಚಕ್ರ ವಾಹನ ವಿತರಣೆ ಮಾಡಲಾಯಿತು.
ಬರಗಾಲದಿಂದ ರೈತರು ಸಂಕಷ್ಟಕ್ಕೀಡಾಗಿರುವುದರಿಂದ ರಾವಣ ಸಂಹಾರ ಕಾರ್ಯಕ್ರಮ ಕೈಬಿಟ್ಟು, ಹೋಮ ಹವನ ನಡೆಸಿ ಸರಳವಾಗಿ ಆಚರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ರಾಮಣ್ಣ ಇರಬಗೇರಾ, ಮುಖಂಡರಾದ ಪಾರಸಮಲ್ ಸುಖಾಣಿ, ಬಷೀರುದ್ದೀನ್, ಜಯವಂತರಾವ ಪತಂಗೆ, ಜಯಣ್ಣ, ಬಿ.ರಮೇಶ, ಶ್ರೀನಿವಾಸರೆಡ್ಡಿ, ಅಮರೇಗೌಡ ಹಂಚಿನಾಳ ಇದ್ದರು.