<p><strong>ಮುದಗಲ್</strong>: ಹೋಬಳಿಯಾದ್ಯಂತ ವಿವಿಧ ಇಲಾಖೆ, ನಿಗಮಗಳ ಅಡಿ, ಶಾಸಕ–ಸಂಸದರ ಅನುದಾನದಿಂದ ನಿರ್ಮಾಣಗೊಂಡಿರುವ ಸಮುದಾಯ ಭವನಗಳು ಪಾಳು ಮನೆಯಂತಿದ್ದು ಉಪಯೋಗಕ್ಕೆ ಬಾರದಂತಾಗಿವೆ.</p>.<p>ಸಮಾಜ ಕಲ್ಯಾಣ ಇಲಾಖೆಯಿಂದ ಅಂಬೇಡ್ಕರ್ ಭವನ, ಬಾಬು ಜಗಜೀವನರಾಂ ಭವನಗಳು, ಸ್ಥಳೀಯ ಶಾಸಕರು, ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಹಲವು ಸಮುದಾಯ ಭವನಗಳು ನಿರ್ಮಾಣಗೊಂಡಿವೆ. ನಿರ್ಮಾಣಗೊಂಡ ಕೆಲ ಭವನಗಳು ಕಳಪೆ ಕಾಮಗಾರಿ ಆಗಿವೆ. ಇದರಿಂದ ಕಾಮಗಾರಿ ಅರ್ಧಕ್ಕೆ ನಿಂತ ಕಟ್ಟಡಗಳನ್ನು ಸ್ಥಳೀಯರು ದನ, ಕರು ಕಟ್ಟಲು, ಕಟಗೆ, ಕೃಷಿ ಪರಿಕರ ಸಂಗ್ರಹ ಮಾಡಲು ಬಳಕೆ ಮಾಡುತ್ತಿದ್ದಾರೆ. ಪಟ್ಟಣದ ಡಕ್ಕಲರ ಕಾಲೊನಿಯಲ್ಲಿರುವ ಸಮುದಾಯ ಭವನ ಮಳೆಗಾಲದಲ್ಲಿ ಜನರು ಮಲಗಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ.</p>.<p>ಪೂರ್ಣಗೊಂಡಿರುವ ಕೆಲ ಸಮುದಾಯ ಭವನಗಳು ಮೂಲ ಸೌಲಭ್ಯಗಳಿಂದ ವಂಚಿತವಾಗಿವೆ. ನಾಲ್ಕು ಗೋಡೆಗಳಷ್ಟೇ ಇದ್ದು ಯಾವುದೇ ಸೌಲಭ್ಯಗಳು ಹೊಂದಿಲ್ಲ. ಸಮೀಪದ ವಂದಾಲಿ ಗ್ರಾಮದಲ್ಲಿ ಕೃಷ್ಣಭಾಗ್ಯ ಜಲನಿಗಮ ನಿಯಮಿತ 2019-20 ನೇ ಸಾಲಿನ ಗಿರಿಜನ (ಟಿಎಸ್ಪಿ) ಯೋಜನೆಯಡಿ ಸುಮಾರು ₹ 25 ಲಕ್ಷ ಮೊತ್ತದಲ್ಲಿ ನಿರ್ಮಾಣಗೊಂಡ ವಾಲ್ಮೀಕಿ ಭವನದ ಕಾಮಗಾರಿ ಕಳಪೆ ಮಟ್ಟದ್ದಾಗಿದೆ ಎಂದು ಗ್ರಾಮಸ್ಥರು ಲೋಕಾಯುಕ್ತರಿಗೆ ದೂರು ನೀಡಿದ್ದರು.</p>.<p>ಹೋಬಳಿಯಲ್ಲಿ ನಿರ್ಮಾಣ ಗೊಂಡ ಬಹುತೇಕ ಕಟ್ಟಡಗಳು ಸಾರ್ವಜನಿಕ ಸಮಾರಂಭಗಳಿಗೆ ಅತೀ ಚಿಕ್ಕದಾಯಿತು ಎಂದು ಜನರು ಮೂಗು ಮುರಿಯುತ್ತಾರೆ. ಇವುಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ಇದರಿಂದ ಇಲ್ಲಿ ಕಾರ್ಯಕ್ರಮ ಆಯೋಜನೆ ಮಾಡುತ್ತಿಲ್ಲ. ಕೆಲ ಕಡೆಗಳಲ್ಲಿ ಭವನಗಳು ಇಸ್ಪೀಟ್ ಅಡ್ಡೆಗಳಾಗಿವೆ. ಸಮಾರಂಭಕ್ಕೆ ಬಳಕೆಯಾಗುತ್ತಿಲ್ಲ. ಮುದಗಲ್ನಲ್ಲಿ ನಿರ್ಮಾಣಗೊಂಡ ಅಂಬೇಡ್ಕರ್ ಭವನ ಪಾಳುಬಿದ್ದಿದ್ದು ಭೂತ ಬಂಗಲೆಯಂತಾಗಿದೆ. ಹೊಸ ಕಟ್ಟಡ ನಿರ್ಮಾಣ ಮಾಡಿಕೊಡಿ ಎಂದು ದಸಂಸ ಪದಾಧಿಕಾರಿಗಳು ಅನೇಕ ಬಾರಿ ಪುರಸಭೆ ಹಾಗೂ ಶಾಸಕರಿಗೆ ಮನವಿ ಮಾಡಿದ್ದಾರೆ. ಬಾಬು ಜಗಜೀವನ್ ರಾಂ ಭವನವೂ ಶಿಥಿಲಾವಸ್ಥೆಯಲ್ಲಿದೆ.</p>.<p>ವಂದಾಲಿ ಗ್ರಾಮದಲ್ಲಿ ನಡೆದ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿ ಕಳಪೆ ಬಗ್ಗೆ ಲಿಂಗಸುಗೂರು ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ವಾಲ್ಮೀಕಿ ನಾಯಕ ಸಮುದಾಯದವರು ಮನವಿ ಪತ್ರ ಸಲ್ಲಿಸಿ ಅನೇಕ ತಿಂಗಳಗಳು ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಯಮನೂರು ಯಲಬುರ್ತಿ ಆರೋಪಿಸಿದರು.</p>.<div><blockquote>ಮುದಗಲ್ನಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಪುರಸಭೆಯಿಂದ ಜಿಲ್ಲಾಧಿಕಾರಿಗೆ ಪ್ರಸ್ತಾವ ಹೋಗಿದೆ. </blockquote><span class="attribution">– ಶರಣಪ್ಪ ಕಟ್ಟಿಮನಿ, ದಸಂಸ ತಾಲ್ಲೂಕು ಮುಖಂಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುದಗಲ್</strong>: ಹೋಬಳಿಯಾದ್ಯಂತ ವಿವಿಧ ಇಲಾಖೆ, ನಿಗಮಗಳ ಅಡಿ, ಶಾಸಕ–ಸಂಸದರ ಅನುದಾನದಿಂದ ನಿರ್ಮಾಣಗೊಂಡಿರುವ ಸಮುದಾಯ ಭವನಗಳು ಪಾಳು ಮನೆಯಂತಿದ್ದು ಉಪಯೋಗಕ್ಕೆ ಬಾರದಂತಾಗಿವೆ.</p>.<p>ಸಮಾಜ ಕಲ್ಯಾಣ ಇಲಾಖೆಯಿಂದ ಅಂಬೇಡ್ಕರ್ ಭವನ, ಬಾಬು ಜಗಜೀವನರಾಂ ಭವನಗಳು, ಸ್ಥಳೀಯ ಶಾಸಕರು, ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಹಲವು ಸಮುದಾಯ ಭವನಗಳು ನಿರ್ಮಾಣಗೊಂಡಿವೆ. ನಿರ್ಮಾಣಗೊಂಡ ಕೆಲ ಭವನಗಳು ಕಳಪೆ ಕಾಮಗಾರಿ ಆಗಿವೆ. ಇದರಿಂದ ಕಾಮಗಾರಿ ಅರ್ಧಕ್ಕೆ ನಿಂತ ಕಟ್ಟಡಗಳನ್ನು ಸ್ಥಳೀಯರು ದನ, ಕರು ಕಟ್ಟಲು, ಕಟಗೆ, ಕೃಷಿ ಪರಿಕರ ಸಂಗ್ರಹ ಮಾಡಲು ಬಳಕೆ ಮಾಡುತ್ತಿದ್ದಾರೆ. ಪಟ್ಟಣದ ಡಕ್ಕಲರ ಕಾಲೊನಿಯಲ್ಲಿರುವ ಸಮುದಾಯ ಭವನ ಮಳೆಗಾಲದಲ್ಲಿ ಜನರು ಮಲಗಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ.</p>.<p>ಪೂರ್ಣಗೊಂಡಿರುವ ಕೆಲ ಸಮುದಾಯ ಭವನಗಳು ಮೂಲ ಸೌಲಭ್ಯಗಳಿಂದ ವಂಚಿತವಾಗಿವೆ. ನಾಲ್ಕು ಗೋಡೆಗಳಷ್ಟೇ ಇದ್ದು ಯಾವುದೇ ಸೌಲಭ್ಯಗಳು ಹೊಂದಿಲ್ಲ. ಸಮೀಪದ ವಂದಾಲಿ ಗ್ರಾಮದಲ್ಲಿ ಕೃಷ್ಣಭಾಗ್ಯ ಜಲನಿಗಮ ನಿಯಮಿತ 2019-20 ನೇ ಸಾಲಿನ ಗಿರಿಜನ (ಟಿಎಸ್ಪಿ) ಯೋಜನೆಯಡಿ ಸುಮಾರು ₹ 25 ಲಕ್ಷ ಮೊತ್ತದಲ್ಲಿ ನಿರ್ಮಾಣಗೊಂಡ ವಾಲ್ಮೀಕಿ ಭವನದ ಕಾಮಗಾರಿ ಕಳಪೆ ಮಟ್ಟದ್ದಾಗಿದೆ ಎಂದು ಗ್ರಾಮಸ್ಥರು ಲೋಕಾಯುಕ್ತರಿಗೆ ದೂರು ನೀಡಿದ್ದರು.</p>.<p>ಹೋಬಳಿಯಲ್ಲಿ ನಿರ್ಮಾಣ ಗೊಂಡ ಬಹುತೇಕ ಕಟ್ಟಡಗಳು ಸಾರ್ವಜನಿಕ ಸಮಾರಂಭಗಳಿಗೆ ಅತೀ ಚಿಕ್ಕದಾಯಿತು ಎಂದು ಜನರು ಮೂಗು ಮುರಿಯುತ್ತಾರೆ. ಇವುಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ಇದರಿಂದ ಇಲ್ಲಿ ಕಾರ್ಯಕ್ರಮ ಆಯೋಜನೆ ಮಾಡುತ್ತಿಲ್ಲ. ಕೆಲ ಕಡೆಗಳಲ್ಲಿ ಭವನಗಳು ಇಸ್ಪೀಟ್ ಅಡ್ಡೆಗಳಾಗಿವೆ. ಸಮಾರಂಭಕ್ಕೆ ಬಳಕೆಯಾಗುತ್ತಿಲ್ಲ. ಮುದಗಲ್ನಲ್ಲಿ ನಿರ್ಮಾಣಗೊಂಡ ಅಂಬೇಡ್ಕರ್ ಭವನ ಪಾಳುಬಿದ್ದಿದ್ದು ಭೂತ ಬಂಗಲೆಯಂತಾಗಿದೆ. ಹೊಸ ಕಟ್ಟಡ ನಿರ್ಮಾಣ ಮಾಡಿಕೊಡಿ ಎಂದು ದಸಂಸ ಪದಾಧಿಕಾರಿಗಳು ಅನೇಕ ಬಾರಿ ಪುರಸಭೆ ಹಾಗೂ ಶಾಸಕರಿಗೆ ಮನವಿ ಮಾಡಿದ್ದಾರೆ. ಬಾಬು ಜಗಜೀವನ್ ರಾಂ ಭವನವೂ ಶಿಥಿಲಾವಸ್ಥೆಯಲ್ಲಿದೆ.</p>.<p>ವಂದಾಲಿ ಗ್ರಾಮದಲ್ಲಿ ನಡೆದ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿ ಕಳಪೆ ಬಗ್ಗೆ ಲಿಂಗಸುಗೂರು ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ವಾಲ್ಮೀಕಿ ನಾಯಕ ಸಮುದಾಯದವರು ಮನವಿ ಪತ್ರ ಸಲ್ಲಿಸಿ ಅನೇಕ ತಿಂಗಳಗಳು ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಯಮನೂರು ಯಲಬುರ್ತಿ ಆರೋಪಿಸಿದರು.</p>.<div><blockquote>ಮುದಗಲ್ನಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಪುರಸಭೆಯಿಂದ ಜಿಲ್ಲಾಧಿಕಾರಿಗೆ ಪ್ರಸ್ತಾವ ಹೋಗಿದೆ. </blockquote><span class="attribution">– ಶರಣಪ್ಪ ಕಟ್ಟಿಮನಿ, ದಸಂಸ ತಾಲ್ಲೂಕು ಮುಖಂಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>