ತಾಯಿ ಕಾಲದಿಂದಲೂ ಕೌದಿ ಹೊಲೆಯುವ ಕೆಲಸವನ್ನು ನೆಚ್ಚಿಕೊಂಡಿರುವ ಮುಮ್ತಾಜ್, ಹುಸೇನಬೀ ಅವರು ರಾಯಚೂರಿನ ಜಲಾಲ್ನಗರದಲ್ಲಿ ಒಂದು ಜೋಪಡಿ ಕಟ್ಟಿಕೊಂಡಿದ್ದಾರೆ. ಆದರೆ, ವರ್ಷವಿಡೀ ಸಂಚಾರದಲ್ಲೇ ಕಳೆಯುವುದಾಗಿ ಹೇಳಿದರು. ರಾಯಚೂರಿನ ಹಳ್ಳಿಗಳು, ಸಿರವಾರ, ಮಸ್ಕಿ, ಬಳಗಾನೂರ, ಗಂಗಾವತಿ, ಚಿನ್ನೂರು, ಕಲಬಂಗಿ, ಬಂಗಾರಟ್ಟಿ... ಹೀಗೆ ದೇಶಾಂತರ ತಿರುಗುವವರು.