ಕಳೆದ 3 ವರ್ಷಗಳ ಹಿಂದೆ ಅಮರಪುರ ಕ್ರಾಸ್–ಚಿಂಚರಕಿ ಕ್ರಾಸ್ವರೆಗೆ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸುಮಾರು ₹ 44 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಚಿಂಚರಕಿ ಕ್ರಾಸ್ ನಿಂದ ಗಲಗ ಗ್ರಾಮದವರೆಗೆ 8 ಕಿ.ಮೀ ಮಾತ್ರ ನಿರ್ಮಿಸಲಾಗಿದೆ. ಉಳಿದ 14 ಕಿ.ಮೀ ಕಾಮಗಾರಿಯನ್ನು ಕೇಂದ್ರದ ಪರಿಹಾರ ನಿಧಿಯಲ್ಲಿ ನಿರ್ಮಿಸಲು ಮಂಜೂರಾತಿ ಸಿಕ್ಕಿದೆ ಎಂಬ ಕಾರಣ ಹೇಳಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಕೂಡಲೇ ಕಾಮಗಾರಿ ಪ್ರಾರಂಭಿಸಬೇಕೆಂದು ಗಲಗ, ಮುಂಡರಗಿ, ದೇವತಗಲ್, ಗಣಜಲಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.