‘ಬಸವಧರ್ಮದ ಮಾನವೀಯ ಮೌಲ್ಯಗಳು ಮತ್ತು ವೈಚಾರಿಕ ತಳಹದಿಯ ಮೇಲೆ ನಿಂತಿರುವ ಚಿತ್ರದುರ್ಗದ ಶ್ರೀಗಳು, ಸುಮಾರು 850 ಬಸವಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಶರಣ ಸಂಸ್ಕೃತಿ, ಉತ್ಸವ, ಶರಣಮೇಳ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಸವತತ್ವ ಪ್ರಚಾರ ಮಾಡುವುದರೊಂದಿಗೆ ಶರಣರ ಆದರ್ಶಗಳನ್ನು ಸಮಾಜದಲ್ಲಿ ಬಿತ್ತರಿಸುವತ್ತ ಮೌಢ್ಯತೆಯನ್ನು ಅಳಿಸಿ ಭಕ್ತರ ಪ್ರೀತಿ ವಿಶ್ವಾಸಕ್ಕೆ ಕಾರಣರಾಗಿದ್ದಾರೆ. ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದ ಮುಂದಾಳತ್ವ ವಹಿಸಿ ವೀರಶೈವ ಎನ್ನುವುದು ಒಂದು ಪಂಗಡ ಎಂದು ಹೇಳಿ, ಅದರಲ್ಲಿಯ ವೈದಿಕ ಮೌಡ್ಯಾಚರಣೆಗಳನ್ನು ಖಂಡಿಸುತ್ತ ಬಂದಿದ್ದಾರೆ. ಆದರೆ ವೆಬ್ಸೈಟ್ ಆರಂಭಿಸಿರುವುದು ಗೊಂದಲ ಮೂಡಿಸಿದೆ’ಎಂದು ತಿಳಿಸಿದರು.