ರಾಯಚೂರು: ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಮಾತನಾಡಿದ ಹಿಂದೂಸಮ್ರಾಟ ಧರ್ಮಸೇನೆ ರಾಜ್ಯಾಧ್ಯಕ್ಷ ಮಧುಗಿರಿ ಮೋದಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಐಎಂಐಎಂ ಸೇರಿಂದಂತೆ ಮುಸ್ಲಿಂ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಶನಿವಾರ ಮನವಿ ಸಲ್ಲಿಸಿದರು. ಇಸ್ಲಾಂ ಧರ್ಮದ ಸಂಸ್ಥಾಪಕ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಸಾಮಾಜಿಕ ಜಾಲಾತಾಣಗಳಲ್ಲಿ ಹರಿಬಿಟ್ಟು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾನೆ. ಸಾಮರಸ್ಯ ಕದಡಿ ಅಶಾಂತಿ ಹುಟ್ಟಿಸಲು ಮುಂದಾಗಿದ್ದು ಮದುಗಿರಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಐಎಂಐಎಂ ಪಕ್ಷದ ನಗರಾಧ್ಯಕ್ಷ ಎಂ.ಡಿ.ಶಾಹೀನ್, ಮೊಹಮ್ಮದ್ ಶಬ್ಬೀರ್, ಮಾಸೂಮ್, ಸಲೀಂ ಸೇರಿ ಮತ್ತಿತರರು ಇದ್ದರು.