ನಗರಸಭೆಯಿಂದ ಆರಂಭಗೊಂಡ ಮೆರವಣಿಗೆ ಏಕಮಿನಾರ್, ತೀನ್ ಕಂದಿಲ್, ಸರಾಫ್ ಬಜಾರ, ಸ್ವಾಮಿ ವಿವೇಕಾನಂದ ವೃತ್ತ, ಹನುಮಾನ್ ಟಾಕೀಜ್, ಎಲ್ವಿಡಿ ಕಾಲೇಜು ಮೂಲಕ ಬನ್ನಿ ಮಂಟಪದವರೆಗೆ ಸಾಗಿತು. ಮಹಿಳೆಯರ ಡೊಳ್ಳು ಕುಣಿತ, ಕೋಲಾಟ, ಗೊಂಬೆಗಳ ನೃತ್ಯ ಹಾಗೂ ವಿವಿಧ ಜಾನಪದ ತಂಡಗಳ ಪ್ರದರ್ಶನ ಗಮನ ಸೆಳೆಯಿತು. ನಗರಸಭೆಯ ಸಿಬ್ಬಂದಿ ನೃತ್ಯಮಾಡಿ ಗಮನ ಸೆಳೆದರು.