<p><strong>ರಾಯಚೂರು</strong>: ನಗರದ ಬ್ರೇಸ್ತವಾರಪೇಟೆಯಲ್ಲಿನ ಉಪ್ಪರವಾಡಿ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 3 ರಿಂದ 12 ವರೆಗೆ 53 ನೇ ನವರಾತ್ರಿ ಉತ್ಸವವನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಮದ್ದಿಕೇರಿ ಈರಣ್ಣ ತಿಳಿಸಿದರು.</p>.<p>ದಸರಾ ನವರಾತ್ರಿ ಉತ್ಸವ ಹಿನ್ನೆಲೆಯಲ್ಲಿ ನಿತ್ಯ ವಾಹನೋತ್ಸವ, ರಥೋತ್ಸವ, ಶ್ರೀನಿವಾಸ ಕಲ್ಯಾಣೋತ್ಸವ, ಉಚ್ಛಾಯ, ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.</p>.<p>ಅಕ್ಟೋಬರ್ 3ರಂದು ಸೂರ್ಯ ವಾಹನ, 4ಕ್ಕೆ ಆದಿಶೇಷ ವಾಹನ, 5ಕ್ಕೆ ಆಂಜನೇಯ ವಾಹನ, 6ರಂದು ಕಾಮಧೇನು ಕಲ್ಪವೃಕ್ಷ ವಾಹನ ಮತ್ತು ಮಹಿಳೆಯರಿಂದ ಕಳಸಗಳ ಸಂಗಡ ದೀರ್ಘದಂಡ ನಮಸ್ಕಾರ ಸೇವೆ, 7ರಂದು ಚಂದ್ರವಾಹನ, 8 ಕ್ಕೆ ಗರುಡ ವಾಹನ, 9ಕ್ಕೆ ಗಜವಾಹನ, 10ರಂದು ಅಶ್ವ ಹಾಗೂ ಉಚ್ಛಾಯ ಮತ್ತು 11ಕ್ಕೆ ಸಿಂಹವಾಹನೋತ್ಸ ಮತ್ತು ರಥೋತ್ಸವ ಜರುಗಲಿದ್ದು, 12ರಂದು ವಿಜಯದಶಮಿ ನಿಮಿತ್ತ ಶ್ರೀನಿವಾಸ ಕಲ್ಯಾಣೋತ್ಸ ನಡೆಯಲಿವೆ ಎಂದು ತಿಳಿಸಿದರು. </p>.<p>ದೇವಸ್ಥಾನದ ಅರ್ಚಕ ಕಾಂತಾಚಾರ್, ಸಮಿತಿ ಪದಾಧಿಕಾರಿಗಳಾದ ಗಟ್ಟಿ ವಂಕಟೇಶ, ಕೆ.ಐನಾಪುರ ಆಂಜನೇಯ್ಯ, ಯು.ವೆಂಕೋಬ, ಆದೋನಿ ಆದಿರಾಜ, ಎನ್.ಬಸವರಾಜ, ಎಚ್.ಆಲ್ವಿ ಶ್ರೀನಿವಾಸ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ನಗರದ ಬ್ರೇಸ್ತವಾರಪೇಟೆಯಲ್ಲಿನ ಉಪ್ಪರವಾಡಿ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 3 ರಿಂದ 12 ವರೆಗೆ 53 ನೇ ನವರಾತ್ರಿ ಉತ್ಸವವನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಮದ್ದಿಕೇರಿ ಈರಣ್ಣ ತಿಳಿಸಿದರು.</p>.<p>ದಸರಾ ನವರಾತ್ರಿ ಉತ್ಸವ ಹಿನ್ನೆಲೆಯಲ್ಲಿ ನಿತ್ಯ ವಾಹನೋತ್ಸವ, ರಥೋತ್ಸವ, ಶ್ರೀನಿವಾಸ ಕಲ್ಯಾಣೋತ್ಸವ, ಉಚ್ಛಾಯ, ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.</p>.<p>ಅಕ್ಟೋಬರ್ 3ರಂದು ಸೂರ್ಯ ವಾಹನ, 4ಕ್ಕೆ ಆದಿಶೇಷ ವಾಹನ, 5ಕ್ಕೆ ಆಂಜನೇಯ ವಾಹನ, 6ರಂದು ಕಾಮಧೇನು ಕಲ್ಪವೃಕ್ಷ ವಾಹನ ಮತ್ತು ಮಹಿಳೆಯರಿಂದ ಕಳಸಗಳ ಸಂಗಡ ದೀರ್ಘದಂಡ ನಮಸ್ಕಾರ ಸೇವೆ, 7ರಂದು ಚಂದ್ರವಾಹನ, 8 ಕ್ಕೆ ಗರುಡ ವಾಹನ, 9ಕ್ಕೆ ಗಜವಾಹನ, 10ರಂದು ಅಶ್ವ ಹಾಗೂ ಉಚ್ಛಾಯ ಮತ್ತು 11ಕ್ಕೆ ಸಿಂಹವಾಹನೋತ್ಸ ಮತ್ತು ರಥೋತ್ಸವ ಜರುಗಲಿದ್ದು, 12ರಂದು ವಿಜಯದಶಮಿ ನಿಮಿತ್ತ ಶ್ರೀನಿವಾಸ ಕಲ್ಯಾಣೋತ್ಸ ನಡೆಯಲಿವೆ ಎಂದು ತಿಳಿಸಿದರು. </p>.<p>ದೇವಸ್ಥಾನದ ಅರ್ಚಕ ಕಾಂತಾಚಾರ್, ಸಮಿತಿ ಪದಾಧಿಕಾರಿಗಳಾದ ಗಟ್ಟಿ ವಂಕಟೇಶ, ಕೆ.ಐನಾಪುರ ಆಂಜನೇಯ್ಯ, ಯು.ವೆಂಕೋಬ, ಆದೋನಿ ಆದಿರಾಜ, ಎನ್.ಬಸವರಾಜ, ಎಚ್.ಆಲ್ವಿ ಶ್ರೀನಿವಾಸ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>