‘ಗಣಿಗಾರಿಕೆಗೆ ಪರವಾನಗಿ ನೀಡಲು ₹1 ಲಕ್ಷ ಲಂಚ ನೀಡುವಂತೆ ಪುಷ್ಪಲತಾ ಬೇಡಿಕೆ ಇಟ್ಟಿದ್ದಾರೆ’ ಎಂದು ಮಸ್ಕಿ ನಿವಾಸಿ ಶ್ರೀಧರ್ ಅವರು ಎಸಿಬಿಗೆ ದೂರು ನೀಡಿದ್ದರು. ಎಸಿಬಿ ಡಿವೈಎಸ್ಪಿ ಅರುಣಕುಮಾರ, ಪೊಲೀಸ್ ಇನ್ಸ್ಪೆಕ್ಟರ್ ಶ್ರೀಧರ ದೊಡ್ಡಿ ಹಾಗೂ ಸಿಬ್ಬಂದಿ, ಪುಷ್ಪಲತಾ ಅವರ ಕಚೇರಿಯ ಮೇಲೆ ಗುರುವಾರ ದಾಳಿ ನಡೆಸಿದರು.