ರಾಯಚೂರು: ಪ್ರಸ್ತುತ ಕೃಷಿಯಲ್ಲಿ ರೈತರು ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಗುರುತಿಸಿ, ವೈಜ್ಞಾನಿಕ ಪರಿಹಾರ ದೊರಕಿಸಿಕೊಡುವ ಅಗತ್ಯತೆಯಿದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಹರೀಶ್ ರಾಮಸ್ವಾಮಿ ಹೇಳಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ಸಮನ್ವಯ ಕಛೇರಿ, ರಾಷ್ಟ್ರೀಯ ಕೃಷಿ ಉನ್ನತ ಶಿಕ್ಷಣ ಯೋಜನೆ; ರಾಯಚೂರು ಕೃಷಿ ಮಹಾವಿದ್ಯಾಲಯ ಹಾಗೂ ಕೃಷಿ ತಾಂತ್ರಿಕ ಮಹಾವಿದ್ಯಾಲಯಗಳ ಶುಕ್ರವಾರ ಆಯೋಜಿಸಿದ್ದ ಪ್ರಥಮ ರಾಷ್ಟ್ರಪತಿ ಹಾಗೂ ಕೃಷಿ ಮಂತ್ರಿಯೂ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮದಿನದ ಪ್ರಯುಕ್ತ ‘ರಾಷ್ಟ್ರೀಯ ಶಿಕ್ಷಣ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯ ಶ್ರೀ ತ್ರಿವಿಕ್ರಮ ಜೋಶಿ ಮಾತನಾಡಿದರು. ಶಿಕ್ಷಣ ನಿರ್ದೇಶಕ ಡಾ.ಎಂ.ಜಿ.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ. ಸತ್ಯ ನಾರಾಯಣರಾವ್ ಸ್ವಾಗತಿಸಿದರು, ಡಾ. ಪ್ರಮೋದ ಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ. ಎಸ್.ಬಿ. ಗೌಡಪ್ಪ ವಂದಿಸಿದರು. ಡಾ. ಟಿ.ಸಿ. ಸುಮಾ ನಿರೂಪಿಸಿದರು.
ವಿಶ್ವವಿದ್ಯಾಲಯದ ಅಧಿಕಾರಿಗಳಾದ ಡಾ. ಬಿ.ಕೆ. ದೇಸಾಯಿ, ಡಾ. ಡಿ.ಎಂ. ಚಂದರಗಿ, ಡಾ. ಎಂ. ಭೀಮಣ್ಣ, ಡಾ. ಎಂ. ವೀರನಗೌಡ, ಡಾ. ಎಂ.ಎಸ್. ಅಯ್ಯನಗೌಡರ್, ಡಾ. ಅಶೋಕ ಜೆ., ಡಾ. ಎಸ್.ಬಿ. ಗೌಡಪ್ಪ, ಡಾ. ಜಾಗ್ರ್ರತಿ ಬಿ. ದೇಶಮಾನ್ಯ, ಡಾ. ಮಚೇಂದ್ರನಾಥ್, ಶ್ರೀ ರವಿ ಆರ್. ಮೆಸ್ತಾ ಇದ್ದರು.