ಸಹಾಯಕ ಪ್ರಾಧ್ಯಾಪಕ ಮಹಾದೇವಪ್ಪ ಮಾತನಾಡಿ, ಇಂದಿನ ಯುವಕರಲ್ಲಿ ಮೊಬೈಲ್ ಗೀಳು ಹೆಚ್ಚಾಗಿದ್ದು ಪುಸ್ತಕ ಓದುವ ಹಾವ್ಯಾಸ ಕಡಿಮೆಯಾಗಿದ್ದು ಕಳವಳಕಾರಿ. ಸುರೇಶ ಹೀರಾ ಅವರು ತಮ್ಮ ಪ್ರಸ್ತುತ ಕೃತಿಯಲ್ಲಿ ಮೊಬೈಲ್, ಪುಸ್ತಕದ ವ್ಯತ್ಯಾಸ, ಪ್ರೀತಿ–ಪ್ರೇಮ, ಸತಿ–ಪತಿಗಳ ಹಾಗೂ ಪ್ರಚಲಿತ ಘಟನೆಗಳನ್ನು ಸೇರಿಸಿ ಬರೆದಿದ್ದು ಒಳ್ಳೆಯ ಸಂದೇಶ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಳೇಜಿನ ಸಹಾಯಕ ಪ್ರಾಧ್ಯಾಪಕ ದಸ್ತಗೀರಸಾಬ್ ದಿನ್ನಿ, ಯುವ ಕವಿ ಈರಣ್ಣ ಬೆಂಗಾಲಿ, ಕೃತಿ ಕರ್ತೃ ಸುರೇಶ ಹೀರಾ ಇದ್ದರು.