ಕೋವಿಡ್ನಿಂದ ಲಾಕ್ಡೌನ್ ಜಾರಿಯಾಗಿದ್ದ ಅವಧಿಯಲ್ಲಿ ಕೆಲವು ವಯೋವೃದ್ಧರು ಭಿಕ್ಷೆ ಬೇಡಿ ಜೀವ ಉಳಿಸಿಕೊಂಡಿದ್ದಾರೆ. ಅಸ್ಕಿಹಾಳದ ತಾಯಮ್ಮ, ಸುಶೀಲಮ್ಮ, ನಿಂಗಪ್ಪ, ಹನುಮಕ್ಕ, ನಾಗಮ್ಮ, ಕರಿಯಪ್ಪ, ವೀರಭದ್ರ.. ಹೀಗೆ ಅನೇಕರು ಮಾಸಾಶನ ಕೈ ಸೇರಿಲ್ಲ ಎಂದು ಗೋಳು ಹೇಳುತ್ತಿದ್ದಾರೆ. ಅಂಚೆಯಣ್ಣನ್ನು ವಿಚಾರಿಸುತ್ತಲೇ ಬಂದಿದ್ದಾರೆ.