ನಗರದಲ್ಲಿ ಮಾದಿಗ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಳ್ಳುವ ಪೂರ್ವ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೆಲ ವಿಚ್ಛಿದ್ರಕಾರಿ ಶಕ್ತಿಗಳು ದೇಶದೊಳಗಡೆ ಇದ್ದುಕೊಂಡೆ ದೇಶದ್ರೋಹ ಮಾಡುತ್ತಿವೆ. ಅಮೂಲ್ಯ ಎಂಬ ವಿದ್ಯಾರ್ಥಿಯ ಪ್ರಚೋದಿತ ಮಾತಿನ ಹಿಂದೆ ಕೆಲ ಸಂಘಟನೆಗಳಿವೆ ಎಂದು ತಿಳಿದಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ತಪ್ಪು ಯಾರೇ ಮಾಡಿದ್ದರೂ ಕಾನೂನು ರೀತ್ಯ ಕ್ರಮ ಜರುಗುತ್ತದೆ’ ಎಂದರು.