ಈ ವೇಳೆ ನೀರಾವರಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕ ನಾಡಗೌಡ, ‘ತಿಮ್ಮಾಪುರ ಏತ ನೀರಾವರಿ ಕೆಲಸವನ್ನು ಗುತ್ತಿಗೆ ಕಂಪನಿ ಸರಿಯಾಗಿ ಮಾಡದೆ ಬೇಜವಾಬ್ದಾರಿ ತೋರುತ್ತಿದ್ದಾರೆ. ಪವರ್ ಸ್ಟೇಶನ್ ಆಗಿಲ್ಲ. ವಿದ್ಯುತ್ ಕೆಲಸ ಆಗಿಲ್ಲ. ಇಲ್ಲಿಗೆ ನಾಲ್ಕೂವರೆ ವರ್ಷವಾಯಿತು. ಹೀಗಾದರೆ ಯಾವಾಗ ಉದ್ಘಾಟನೆ ಮಾಡೋದು, ಯಾವಾಗ ಕೆಳಭಾಗದ ರೈತರ ಜಮೀನುಗಳಿಗೆ ನೀರು ಕೊಡೋದು. ಈ ಗುತ್ತಿಗೆ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸುವ ಮೂಲಕ ಕ್ರಮ ಜರುಗಿಸಬೇಕು’ ಎಂದು ಸೂಚನೆ ನೀಡಿದರು.