ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಿದ್ಧಲಿಂಗಪ್ಪ ಮಾತನಾಡಿ, ಸ್ವಯಂಸೇವಕರು ಅರ್ಪಣಾ ಮನೋಭಾವದಿಂದ ಸೇವೆಯನ್ನು ಸಲ್ಲಿಸಬೇಕು. ಸೇವೆಯ ಮೂಲಕ ಭಾವನೆಗಳನ್ನು ನಿಯಂತ್ರಿಸಿ, ಮನಸ್ಸನ್ನು ಹತೋಟಿಯಲ್ಲಿಡಲು ಕಲಿಯಬೇಕು. ಇನ್ನೊಬ್ಬರ ಕಷ್ಟ, ನೋವುಗಳನ್ನು ಅರಿತುಕೊಂಡು ಅವರ ನೋವಿನಲ್ಲಿ ಭಾಗಿಯಾದಾಗ ಬದುಕಿಗೆ ಅರ್ಥ ಬರುತ್ತದೆ ಎಂದು ಹೇಳಿದರು.