’ಬಂಗಾರ ಚೈನ್, ಮಗನ ಕಾಲುಚೈನ್, ಕಡಗ, ಉಂಗುರ, ಲಿಂಗದಕಾಯಿ ಸಾಮಾನು ಕಳ್ಳತನವಾಗಿದೆ. ಈ ಕುರಿತು ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಪೊಲೀಸರು ಬಂದು ಫೋಟೋ ತೆಗೆದುಕೊಂಡು ಹೋಗಿದ್ದಾರೆ. ಆದರೆ ಇಲ್ಲಿಯವರೆಗೆ ಪ್ರಕರಣ ಕುರಿತು ಗಂಭೀರ ತನಿಖೆ ಕೈಗೊಂಡಿಲ್ಲ, ಆರೋಪಿಯನ್ನು ಬಂಧಿಸಿಲ್ಲ, ಬಂಗಾರದ ಸಾಮಾನುಗಳನ್ನು ವಾಪಾಸ್ ಕೊಟ್ಟಿಲ್ಲ. ಪೊಲೀಸ್ ಠಾಣೆಗೆ ಹೋಗಿ ಕೇಳಿದರೆ ಹುಡುಕುತ್ತಿದ್ದೇವೆಂದು ಪೊಲೀಸರು ಹೇಳುತ್ತಿದ್ದಾರೆ’ ಎಂದು ಸಾವಿತ್ರಮ್ಮ ಗೃಹ ಸಚಿವರಿಗೆ ದೂರು ಸಲ್ಲಿಸಿದರು.