ರಾಯಚೂರು/ಯಾದಗಿರಿ: ಕೃಷ್ಣಾ ನದಿ ಪ್ರವಾಹದಿಂದ ಸಂಪರ್ಕ ಕಡಿದುಕೊಂಡಿರುವ ಯಳಗುಂದಿ ನಡುಗಡ್ಡಿಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮೂವರು ಮಕ್ಕಳನ್ನು ಬೋಟ್ಗಳಲ್ಲಿ ಕರೆತಂದು ರಾಯಚೂರುಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು.
ಎನ್ಡಿಆರ್ಎಫ್ ತಂಡದವರು ಈ ಮಕ್ಕಳು ಹಾಗೂ ಅವರ ಪಾಲಕರನ್ನು ಬೋಟ್ಗಳಲ್ಲಿ ಕರೆತಂದರು.
ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 5.86 ಲಕ್ಷ ಕ್ಯುಸೆಕ್ ನೀರು ಬಿಡುತ್ತಿದ್ದು, ಯಾದಗಿರಿ, ರಾಯಚೂರು ಜಿಲ್ಲೆಗಳ ಈ ನದಿ ತೀರದಲ್ಲಿ ಪ್ರವಾಹ ಸ್ಥಿತಿ ಇನ್ನೂ ಯಥಾಸ್ಥಿತಿಯಲ್ಲಿದೆ.