ಮಠದ ಹೇಳಿಕೆ: ‘ಭಕ್ತರೊಬ್ಬರು ಹರಕೆಗಾಗಿ ಹಂಚುವಂತೆ ಕೊಟ್ಟಿದ್ದ ₹ 100 ಮುಖಬೆಲೆಯ ನೋಟುಗಳನ್ನು ಶ್ರೀಗಳು ಹಂಚುವುದಕ್ಕೆ ಯತ್ನಿಸಿದ್ದಾರೆ. ಆದರೆ, ಜನಸಂದಣಿಯಾಗಬಹುದು ಎಂಬುದನ್ನು ಅರಿತು ಕೂಡಲೇ ಇದನ್ನು ಕೈಬಿಟ್ಟಿರುವುದನ್ನು ಭಕ್ತ ಸಮೂಹ ನೋಡಿದೆ. ನೂಕುನುಗ್ಗಲು ಆಗಿದೆ ಎಂಬುದು ಸತ್ಯವಲ್ಲ, ಇದರಲ್ಲಿ ದುರುದ್ದೇಶವಿದೆ’ಎಂದು ಮಠದ ಆಡಳಿತ ವ್ಯವಸ್ಥಾಪಕ ಎಸ್.ಕೆ. ಶ್ರೀನಿವಾಸ ಸ್ಪಷ್ಟನೆ ನೀಡಿದ್ದಾರೆ.