ರಾಯಚೂರಿಗೆ ನೇರ ಆಸ್ಪತ್ರೆಗೆ ಬರುವವರನ್ನು ಹೊರತುಪಡಿಸಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಂದ ಯಾವುದೇ ವ್ಯಕ್ತಿಯು ಕರ್ನಾಟಕದತ್ತ ಬರಲು ಪೊಲೀಸರು ಬಿಡುತ್ತಿಲ್ಲ. ಸಿಂಗನೋಡಿ, ಶಕ್ತಿನಗರ, ತುಂಗಭದ್ರಾ ಸೇರಿ ವಿವಿಧೆಡೆ ಅಂತರರಾಜ್ಯ ಸಂಪರ್ಕಿಸುವ ಮುಖ್ಯರಸ್ತೆಗಳಲ್ಲಿ ಚೆಕ್ಪೋಸ್ಟ್ಗಳಿದ್ದು, ವಾಹನಗಳ ಸಂಚರಿಸಲು ಬಿಡುತ್ತಿಲ್ಲ.