ರಾಯಚೂರು: ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 350ನೇ ಆರಾಧನೆಯು ಸಂಭ್ರಮ, ಸಡಗರದೊಂದಿಗೆ ನಡೆಯುತ್ತಿದೆ.
ಮಂಗಳವಾರ ರಾಯರ ಮಧ್ಯಾರಾಧನೆ ನಿಮಿತ್ತ, ತಿರುಪತಿಯ ವೆಂಕಟೇಶ್ವರ ಸನ್ನಿಧಿಯಿಂದ ಶೇಷ ವಸ್ತ್ರವನ್ನು ದೇವಸ್ಥಾನ ಮಂಡಳಿ ಅಧಿಕಾರಿಗಳು ಮಂತ್ರಾಲಯಕ್ಕೆ ತೆಗೆದುಕೊಂಡು ಬಂದಿದ್ದರು. ಟಿಟಿಡಿ ಅಧಿಕಾರಿಗಳು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರಿಗೆ ಹಸ್ತಾಂತರಿಸಿದರು. ವಿಶೇಷ ಮೆರವಣಿಗೆ ನಡೆಯಿತು.
ಶ್ರೀಗಳು ಶೇಷ ವಸ್ತ್ರವನ್ನು ಬರಮಾಡಿಕೊಂಡು, ಹರಿವಾಣದಲ್ಲಿ ತಲೆಮೇಲೆ ಹೊತ್ತು ಮಠದ ಗರ್ಭಗುಡಿಗೆ ತೆಗೆದುಕೊಂಡು ಹೋದರು. ಚಂಡಿವಾಧ್ಯ, ಪಂಡಿತರ ಮಂತ್ರೋಚ್ಚಾರಣೆಯೊಂದಿಗೆ ಶೇಷವಸ್ತ್ರವನ್ನು ರಾಯರ ವೃಂದಾವನಕ್ಕೆ ಸಮರ್ಪಿಸಲಾಯಿತು.