ಕೂಡಲೇ ಕೆಪಿಸಿಎಲ್ ಅಗ್ನಿಶಾಮಕ ಸಿಬ್ಬಂದಿ ಕಾರ್ಯಪ್ರವೃತ್ತವಾಗಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಶಾಖೋತ್ಪನ್ನ ವಿದ್ಯುತ್ಗೆ ಬೇಡಿಕೆಯಿಲ್ಲದೆ ಕೆಲವು ತಿಂಗಳುಗಳಿಂದ ಸ್ಥಾವರದ ಎಲ್ಲ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ. ಸೋಮವಾರದಿಂದ ಒಂದನೇ ಘಟಕ ಆರಂಭಿಸಲಾಗಿದೆ. ಮರುದಿನವೇ 4 ನೇ ಘಟಕ ಆರಂಭಿಸುವಾಗ ಬೆಂಕಿ ಅವಘಡ ಕಾಣಿಸಿಕೊಂಡಿದೆ.