ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದುಗೊಳಿಸಬೇಕು ಮತ್ತು ಬಾಕಿ ವೇತನ ಪಾವತಿಸಲು ಒತ್ತಾಯಿಸಿ ಕಳೆದ ವರ್ಷ 72 ದಿನಗಳ ಐತಿಹಾಸಿಕ ಹೋರಾಟ ನಡೆಸಲಾಗಿತ್ತು. ಅಂದು ಸಚಿವರು, ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ಕೊಟ್ಟು ಧರಣಿ ಹಿಂಪಡೆಯಲು ಮನವೊಲಿಸಿದ್ದರು. ಇವರೆಗೂ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದರು.