ಜಿಲ್ಲಾಧಿಕಾರಿ ಕಚೇರಿಯ ಸ್ಥಾನಿಕ ಅಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದ ಅವರು, ತಾಲ್ಲೂಕು ಮಟ್ಟದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರು ಮುಗ್ಧ, ಅನಕ್ಷರಸ್ಥ, ಬಡತನಕ್ಕೆ ಸಿಲುಕಿದ ಜನರಾಗಿದ್ದಾರೆ. ನೇಮಕಾತಿ ಪ್ರಕ್ರಿಯೆ ವಿಷಯದಲ್ಲಿ ಅವರನ್ನು ಜಾಗೃತಗೊಳಿಸಬೇಕಾಗಿದೆ. ಒಂದು ವೇಳೆ ಪೌರಕಾರ್ಮಿಕರನ್ನು ನೇಮಕಾತಿ ವಿಷಯದಲ್ಲಿ ಜಾಗೃತಗೊಳಿಸದಿದ್ದರೆ, ರಾಯಚೂರು ನಗರಸಭೆಯಲ್ಲಿ ನಡೆದಂತೆ ಪೌರ ಕಾರ್ಮಿಕರಲ್ಲದವರು ಕಾನೂನು ಬಾಹಿರ ನೇಮಕವಾಗುವ ಸಾಧ್ಯತೆಗಳು ಇವೆ ಎಂದರು.