ಅವೈಜ್ಞಾನಿಕವಾದ ರಸ್ತೆಗಳ ನಿರ್ಮಾಣ, ರೈಲು ಮಾರ್ಗ ನಿರ್ಮಾಣ, ವಿದ್ಯುತ್ ಯೋಜನೆ ರೂಪಿಸುವುದರಿಂದ ನೀರು ಚದುರಿ ಹೋಗಿದೆ. ತುಂಗಭದ್ರ ನದಿ ನಾಶವನ್ನು ತಡೆಗಟ್ಟದೇ ಇದ್ದರೆ, ಭದ್ರಾ ಜಲಾಶಯ, ತುಂಗಭದ್ರಾ, ಭದ್ರ ಮೇಲ್ದಂಡೆ ಯೋಜನೆಯ ಡ್ಯಾಮುಗಳಿಂದ 50 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶ ಬೆಳೆ ಬೆಳೆಯಲಾಗದೇ ರೈತಾಪಿ ಜನ ತತ್ತರಿಸಿ ಹೋಗುವ ಅಪಾಯವಿದೆ. ಮುಂದೆ ರಾಯಚೂರಿಗೆ ಕುಡಿಯಲು ನೀರು ಸಹ ಸಿಗುವುದಿಲ್ಲ ಎಂದು ತಿಳಿಸಿದರು.