<p><strong>ರಾಯಚೂರು</strong>: ‘ಸಾಮುದಾಯಿಕ ಸೇವಾ ಕಾರ್ಯಗಳನ್ನು ಸಮಾಜ ಯಾವತ್ತೂ ಬೆಂಬಲಿಸುತ್ತದೆ’ ಎಂದು ಮಟಮಾರಿಯ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಸನಗೌಡ ಬುರೆಡ್ಡಿ ಹೇಳಿದರು.</p>.<p>ಮಟಮಾರಿ ಗ್ರಾಮದಲ್ಲಿ ಆಯೋಜಿಸಿದ್ದ ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್ಎಸ್ಎಸ್ ಘಟಕದ 2025-26ನೇ ಸಾಲಿನ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.</p>.<p>‘ಉದ್ಯೋಗ ಮತ್ತು ಆರ್ಥಿಕ ಸಂಪಾದನೆಯ ಸ್ವಾರ್ಥದ ಹಿಂದೆ ಓಡುತ್ತಿರುವ ಇಂದಿನ ಯುವ ಜನತೆಯಲ್ಲಿ ಸಾಮಾಜಿಕ ಮತ್ತು ಸಾಮುದಾಯಿಕ ಸೇವೆಯ ಪ್ರಜ್ಞೆ ಕಾಣುವುದು ಬಹಳ ಅಪರೂಪವಾಗಿದೆ’ ಎಂದರು.</p>.<p>‘ಗ್ರಾಮಗಳ ಶ್ರೇಯೋಭಿವೃದ್ಧಿಯು ಯುವಜನತೆಯ ಶ್ರಮ ಮತ್ತು ಭಾಗವಹಿಸುವಿಕೆಯನ್ನು ಅವಲಂಬಿಸಿದೆ. ಸಾಮಾಜಿಕ ಅಭಿವೃದ್ಧಿಯು ಸಮಾಜ ಮತ್ತು ಸಾಮುದಾಯಿಕ ಸೇವೆಗಳನ್ನು ಆಧರಿಸಿದ್ದು, ಅಂತಹ ಕಾರ್ಯಚಟುವಟಿಕೆಗಳನ್ನು ಯಾರೇ ನಿರ್ವಹಿಸಿದರೂ ಸಮಾಜ ಬೆಂಬಲಿಸುತ್ತದೆ’ ಎಂದು ಹೇಳಿದರು.</p>.<p>ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೇಖರಪ್ಪ ಮಾತನಾಡಿ, ‘ಕಾಲೇಜಿನ ಕೋಣೆಗಳಲ್ಲಿ ಕಲಿತು ಕೊಂಡು ಸಂಪಾದಿಸುವ ಜ್ಞಾನಕ್ಕಿಂತ, ಚಟುವಟಿಕೆಗಳಲ್ಲಿ ಭಾಗವಹಿಸಿ, ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಂಡಾಗ ಸಿಗುವ ಅನುಭವ ಜನ್ಯ ಜ್ಞಾನವೂ ಇಂದಿನ ಯುವ ಜನತೆಗೆ ಅಗತ್ಯವಿದೆ’ ಎಂದು ತಿಳಿಸಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಸುಗುಣಾ ಬಸವರಾಜ ಮಾತನಾಡಿದರು. ಎನ್ಎಸ್ಎಸ್ ಅಧಿಕಾರಿ ಸಂತೋಷಕುಮಾರ ರೇವೂರ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಗ್ರಾಮದ ಮುಖಂಡರಾದ ಬಸನಗೌಡ ಮುದೀಗೌಡರ, ಚಂದ್ರಪ್ಪ ನಾಯಕ, ಈರಣ್ಣ, ಪ್ರಾಧ್ಯಾಪಕ ಶರಣಗೌಡ.ಕೆ, ರೇಖಾ ಪಾಟೀಲ, ವೀರಾಂಜನೇಯ ಉಪಸ್ಥಿತರಿದ್ದರು.</p>.<p>ಸ್ವಯಂ ಸೇವಕಿ ಸಂಗೀತಾ ಪ್ರಕಾಶ, ಮಹೇಶ್ವರಿ ಹಾಗೂ ತೇಜೇಶ್ವರಿ ಪ್ರಾರ್ಥನೆ ಗೀತೆ ಹಾಡಿದರು. ಸಂಗೀತಾ ಸ್ವಾಗತಿಸಿದರು. ಲಕ್ಷ್ಮೀ ನರಸಪ್ಪ ನಿರೂಪಿಸಿದರು. ತೇಜೇಶ್ವರಿ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260515-32-1321755297</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ‘ಸಾಮುದಾಯಿಕ ಸೇವಾ ಕಾರ್ಯಗಳನ್ನು ಸಮಾಜ ಯಾವತ್ತೂ ಬೆಂಬಲಿಸುತ್ತದೆ’ ಎಂದು ಮಟಮಾರಿಯ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಸನಗೌಡ ಬುರೆಡ್ಡಿ ಹೇಳಿದರು.</p>.<p>ಮಟಮಾರಿ ಗ್ರಾಮದಲ್ಲಿ ಆಯೋಜಿಸಿದ್ದ ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್ಎಸ್ಎಸ್ ಘಟಕದ 2025-26ನೇ ಸಾಲಿನ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.</p>.<p>‘ಉದ್ಯೋಗ ಮತ್ತು ಆರ್ಥಿಕ ಸಂಪಾದನೆಯ ಸ್ವಾರ್ಥದ ಹಿಂದೆ ಓಡುತ್ತಿರುವ ಇಂದಿನ ಯುವ ಜನತೆಯಲ್ಲಿ ಸಾಮಾಜಿಕ ಮತ್ತು ಸಾಮುದಾಯಿಕ ಸೇವೆಯ ಪ್ರಜ್ಞೆ ಕಾಣುವುದು ಬಹಳ ಅಪರೂಪವಾಗಿದೆ’ ಎಂದರು.</p>.<p>‘ಗ್ರಾಮಗಳ ಶ್ರೇಯೋಭಿವೃದ್ಧಿಯು ಯುವಜನತೆಯ ಶ್ರಮ ಮತ್ತು ಭಾಗವಹಿಸುವಿಕೆಯನ್ನು ಅವಲಂಬಿಸಿದೆ. ಸಾಮಾಜಿಕ ಅಭಿವೃದ್ಧಿಯು ಸಮಾಜ ಮತ್ತು ಸಾಮುದಾಯಿಕ ಸೇವೆಗಳನ್ನು ಆಧರಿಸಿದ್ದು, ಅಂತಹ ಕಾರ್ಯಚಟುವಟಿಕೆಗಳನ್ನು ಯಾರೇ ನಿರ್ವಹಿಸಿದರೂ ಸಮಾಜ ಬೆಂಬಲಿಸುತ್ತದೆ’ ಎಂದು ಹೇಳಿದರು.</p>.<p>ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೇಖರಪ್ಪ ಮಾತನಾಡಿ, ‘ಕಾಲೇಜಿನ ಕೋಣೆಗಳಲ್ಲಿ ಕಲಿತು ಕೊಂಡು ಸಂಪಾದಿಸುವ ಜ್ಞಾನಕ್ಕಿಂತ, ಚಟುವಟಿಕೆಗಳಲ್ಲಿ ಭಾಗವಹಿಸಿ, ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಂಡಾಗ ಸಿಗುವ ಅನುಭವ ಜನ್ಯ ಜ್ಞಾನವೂ ಇಂದಿನ ಯುವ ಜನತೆಗೆ ಅಗತ್ಯವಿದೆ’ ಎಂದು ತಿಳಿಸಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಸುಗುಣಾ ಬಸವರಾಜ ಮಾತನಾಡಿದರು. ಎನ್ಎಸ್ಎಸ್ ಅಧಿಕಾರಿ ಸಂತೋಷಕುಮಾರ ರೇವೂರ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಗ್ರಾಮದ ಮುಖಂಡರಾದ ಬಸನಗೌಡ ಮುದೀಗೌಡರ, ಚಂದ್ರಪ್ಪ ನಾಯಕ, ಈರಣ್ಣ, ಪ್ರಾಧ್ಯಾಪಕ ಶರಣಗೌಡ.ಕೆ, ರೇಖಾ ಪಾಟೀಲ, ವೀರಾಂಜನೇಯ ಉಪಸ್ಥಿತರಿದ್ದರು.</p>.<p>ಸ್ವಯಂ ಸೇವಕಿ ಸಂಗೀತಾ ಪ್ರಕಾಶ, ಮಹೇಶ್ವರಿ ಹಾಗೂ ತೇಜೇಶ್ವರಿ ಪ್ರಾರ್ಥನೆ ಗೀತೆ ಹಾಡಿದರು. ಸಂಗೀತಾ ಸ್ವಾಗತಿಸಿದರು. ಲಕ್ಷ್ಮೀ ನರಸಪ್ಪ ನಿರೂಪಿಸಿದರು. ತೇಜೇಶ್ವರಿ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260515-32-1321755297</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>