ಮಹಾರಾಷ್ಟ್ರದಿಂದ ಜಿಲ್ಲೆಗೆ ಇದುವರೆಗೂ 4,555 ಜನರು ಬಂದಿದ್ದಾರೆ. ಸದ್ಯಕ್ಕೆ ಕ್ವಾರಂಟೈನ್ ಕೇಂದ್ರಗಳಲ್ಲಿ 157 ಜನರನ್ನು ಉಳಿಸಲಾಗಿದೆ. ತಮಿಳುನಾಡಿನಿಂದ ಬಂದಿರುವ 6 ಜನರು, ರಾಜಸ್ತಾನದಿಂದ ಬಂದಿರುವ ಒಬ್ಬರು, ತೆಲಂಗಾಣದಿಂದ ಬಂದಿರುವ ಎಂಟು ಜನರು ಹಾಗೂ ಆಂಧ್ರಪ್ರದೇಶದಿಂದ ಬಂದಿರುವ ಇಬ್ಬರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.