<p><strong>ರಾಯಚೂರು:</strong> ಕತ್ತಲು ಕಳೆದು ಬೆಳಕು ಚೆಲ್ಲುವ ನಗರದ ಕೆಲವು ವಿದ್ಯುತ್ ಪರಿವರ್ತಕಗಳ ಸುತ್ತ ತಂತಿ ಬೇಲಿ ಇಲ್ಲ. ಇವುಗಳು ಅಪಾಯ ಆಹ್ವಾನಿಸುತ್ತಿದ್ದರೂ ಜೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.</p>.<p>ನಗರದ ಗಂಜ್ ರಸ್ತೆ, ಪಟೇಲ್ ರಸ್ತೆ, ಮಾವಿನ ಕೆರೆ ರಸ್ತೆ, ಸ್ಟೇಷನ್ ರಸ್ತೆ, ಆಜಾದ್ ನಗರ ಹಾಗೂ ಆರ್ಟಿಒ ಕಚೇರಿ ಸಮೀಪ ಅಳವಡಿಸಿರುವ ಅನೇಕ ವಿದ್ಯುತ್ ಪರಿವರ್ತಕಗಳಿಗೆ ರಕ್ಷಣಾ ತಂತಿ ಬೇಲಿ ಇಲ್ಲ. ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಹೆಚ್ಚಾಗಿ ಸಂಚರಿಸುವ ಪ್ರದೇಶಗಳಲ್ಲಿಯೇ ಇಂತಹ ಅಪಾಯಕಾರಿ ಸ್ಥಿತಿಯಲ್ಲಿ ವಿದ್ಯುತ್ ಪರಿವರ್ತಕಗಳಿವೆ.</p>.<p>ಪರಿವರ್ತಕಗಳ ಬಳಿ ಎಚ್ಚರಿಕೆ ಫಲಕ ಅಳವಡಿಸಿಲ್ಲ. ಪರಿವರ್ತಕಗಳಿಂದ ವಿದ್ಯುತ್ ಸಾಗಿಸುವ ತಂತಿಗಳು ಕೆಳಮಟ್ಟದಲ್ಲಿ ಹಾದು ಹೋಗಿವೆ. ಕೆಲವು ಕಡೆ ಹಳೆಯ ಹಾಗೂ ಬಾಗಿದ ವಿದ್ಯುತ್ ಕಂಬಗಳ ಮೇಲೆ ಪರಿವರ್ತಕಗಳು ನೇತಾಡುತ್ತಿದ್ದು, ಇನ್ನೂ ಕೆಲವೆಡೆ ನೆಲಮಟ್ಟದಲ್ಲೇ ಇವೆ. ಮಳೆಗಾಲದಲ್ಲಿ ತೇವಾಂಶ ಹೆಚ್ಚಾದರೆ, ವಿದ್ಯುತ್ ಪ್ರವಹಿಸುವ ಸಾಧ್ಯತೆಯೂ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.</p>.<p>‘ಸಣ್ಣ ಮಕ್ಕಳು ಬೆಳಿಗ್ಗೆ ಮತ್ತು ಸಂಜೆ ರಸ್ತೆ ಬದಿ ಆಟವಾಡುತ್ತಾರೆ. ಆಟದ ಮಧ್ಯೆ ಚೆಂಡು ಪರಿವರ್ತಕದ ಬಳಿ ಹೋಗುವುದು ಸಾಮಾನ್ಯ. ಅಪ್ಪಿತಪ್ಪಿ ಕಂಬ ಅಥವಾ ತಂತಿ ಸ್ಪರ್ಶಿಸಿದರೆ ದೊಡ್ಡ ಅನಾಹುತ ಸಂಭವಿಸಬಹುದು’ ಎಂದು ಸ್ಥಳೀಯ ನಿವಾಸಿ ಶೇಕಪ್ಪ ಹೇಳಿದರು.</p>.<p>‘ಸಾರ್ವಜನಿಕರು ಮನೆಯ ಕಸವನ್ನು ವಿದ್ಯುತ್ ಪರಿವರ್ತಕಗಳ ಸುತ್ತ ಹಾಕುತ್ತಿರುವುದೂ ಮತ್ತೊಂದು ಸಮಸ್ಯೆಯಾಗಿದೆ. ಪ್ಲಾಸ್ಟಿಕ್, ಒಣಕಸ ಹಾಗೂ ತ್ಯಾಜ್ಯಗಳು ಪರಿವರ್ತಕಗಳ ಬಳಿ ರಾಶಿಯಾಗಿ ಬೀಳುತ್ತಿದ್ದು, ಕೆಲವೊಮ್ಮೆ ಕಿಡಿ ಹೊತ್ತಿ ಬೆಂಕಿ ಅವಘಡ ಸಂಭವಿಸುವ ಭೀತಿಯೂ ಇದೆ. ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪರಿವರ್ತಕಗಳ ಸುತ್ತ ಸ್ವಚ್ಛತೆ ಕಾಪಾಡದಿದ್ದರೆ ಸಾರ್ವಜನಿಕರ ಜೀವಕ್ಕೆ ಅಪಾಯ ತಪ್ಪದು’ ಎಂದು ಸ್ಥಳೀಯ ನಿವಾಸಿ ಯಲ್ಲಪ್ಪ ಆತಂಕ ವ್ಯಕ್ತಪಡಿಸುತ್ತಾರೆ.</p>.<p>ಆಜಾದ್ ನಗರ ಪ್ರದೇಶದಲ್ಲಿ ಪೌರ ಕಾರ್ಮಿಕರು ಕಸ ತೆರವುಗೊಳಿಸಲು ತೆರಳುವಾಗಲೂ ಜೀವಭಯದಲ್ಲೇ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ವಿದ್ಯುತ್ ಕಂಬಗಳ ಅಕ್ಕಪಕ್ಕದಲ್ಲೇ ಕಸ ರಾಶಿಯಾಗಿರುವುದರಿಂದ ಸ್ವಚ್ಛತಾ ಸಿಬ್ಬಂದಿಗೂ ಅಪಾಯ ಎದುರಾಗುತ್ತಿದೆ. ಜಾಗೃತಿ ಮೂಡಿಸಿದರೂ ಪ್ರಯೋಜನವಾಗಿಲ್ಲ ಎಂದು ಪೌರ ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<p>ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ವಾಹನ ಸಂಚಾರದ ನಡುವೆ ಹಳೆ ವಿದ್ಯುತ್ ಪರಿವರ್ತಕಗಳ ನಿರ್ವಹಣೆಯೂ ಸಮರ್ಪಕವಾಗಿ ನಡೆ ಯುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಹಲವೆಡೆ ಪರಿವರ್ತಕಗಳ ಕೆಳಭಾಗದಲ್ಲಿ ಕಳೆ ಬೆಳೆದಿದೆ. ಅನಾಹುತ ಸಂಭವಿಸುವ ಮುನ್ನವೇ ಜೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡು ಎಲ್ಲ ಪರಿವರ್ತಕಗಳ ಸುತ್ತ ತಂತಿ ಬೇಲಿ ಅಳವಡಿಸಬೇಕು. ಎಚ್ಚರಿಕೆ ಫಲಕ ಹಾಕಬೇಕು ಹಾಗೂ ಅಪಾಯಕಾರಿ ಸ್ಥಿತಿಯಲ್ಲಿರುವ ಕಂಬ ಮತ್ತು ತಂತಿಗಳನ್ನು ತಕ್ಷಣ ದುರಸ್ತಿ ಮಾಡಬೇಕು ಎಂದು ಸ್ಥಳೀಯ ನಿವಾಸಿ ಶೇಖರಪ್ಪ ಆಗ್ರಹಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260512-32-1105013319</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ಕತ್ತಲು ಕಳೆದು ಬೆಳಕು ಚೆಲ್ಲುವ ನಗರದ ಕೆಲವು ವಿದ್ಯುತ್ ಪರಿವರ್ತಕಗಳ ಸುತ್ತ ತಂತಿ ಬೇಲಿ ಇಲ್ಲ. ಇವುಗಳು ಅಪಾಯ ಆಹ್ವಾನಿಸುತ್ತಿದ್ದರೂ ಜೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.</p>.<p>ನಗರದ ಗಂಜ್ ರಸ್ತೆ, ಪಟೇಲ್ ರಸ್ತೆ, ಮಾವಿನ ಕೆರೆ ರಸ್ತೆ, ಸ್ಟೇಷನ್ ರಸ್ತೆ, ಆಜಾದ್ ನಗರ ಹಾಗೂ ಆರ್ಟಿಒ ಕಚೇರಿ ಸಮೀಪ ಅಳವಡಿಸಿರುವ ಅನೇಕ ವಿದ್ಯುತ್ ಪರಿವರ್ತಕಗಳಿಗೆ ರಕ್ಷಣಾ ತಂತಿ ಬೇಲಿ ಇಲ್ಲ. ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಹೆಚ್ಚಾಗಿ ಸಂಚರಿಸುವ ಪ್ರದೇಶಗಳಲ್ಲಿಯೇ ಇಂತಹ ಅಪಾಯಕಾರಿ ಸ್ಥಿತಿಯಲ್ಲಿ ವಿದ್ಯುತ್ ಪರಿವರ್ತಕಗಳಿವೆ.</p>.<p>ಪರಿವರ್ತಕಗಳ ಬಳಿ ಎಚ್ಚರಿಕೆ ಫಲಕ ಅಳವಡಿಸಿಲ್ಲ. ಪರಿವರ್ತಕಗಳಿಂದ ವಿದ್ಯುತ್ ಸಾಗಿಸುವ ತಂತಿಗಳು ಕೆಳಮಟ್ಟದಲ್ಲಿ ಹಾದು ಹೋಗಿವೆ. ಕೆಲವು ಕಡೆ ಹಳೆಯ ಹಾಗೂ ಬಾಗಿದ ವಿದ್ಯುತ್ ಕಂಬಗಳ ಮೇಲೆ ಪರಿವರ್ತಕಗಳು ನೇತಾಡುತ್ತಿದ್ದು, ಇನ್ನೂ ಕೆಲವೆಡೆ ನೆಲಮಟ್ಟದಲ್ಲೇ ಇವೆ. ಮಳೆಗಾಲದಲ್ಲಿ ತೇವಾಂಶ ಹೆಚ್ಚಾದರೆ, ವಿದ್ಯುತ್ ಪ್ರವಹಿಸುವ ಸಾಧ್ಯತೆಯೂ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.</p>.<p>‘ಸಣ್ಣ ಮಕ್ಕಳು ಬೆಳಿಗ್ಗೆ ಮತ್ತು ಸಂಜೆ ರಸ್ತೆ ಬದಿ ಆಟವಾಡುತ್ತಾರೆ. ಆಟದ ಮಧ್ಯೆ ಚೆಂಡು ಪರಿವರ್ತಕದ ಬಳಿ ಹೋಗುವುದು ಸಾಮಾನ್ಯ. ಅಪ್ಪಿತಪ್ಪಿ ಕಂಬ ಅಥವಾ ತಂತಿ ಸ್ಪರ್ಶಿಸಿದರೆ ದೊಡ್ಡ ಅನಾಹುತ ಸಂಭವಿಸಬಹುದು’ ಎಂದು ಸ್ಥಳೀಯ ನಿವಾಸಿ ಶೇಕಪ್ಪ ಹೇಳಿದರು.</p>.<p>‘ಸಾರ್ವಜನಿಕರು ಮನೆಯ ಕಸವನ್ನು ವಿದ್ಯುತ್ ಪರಿವರ್ತಕಗಳ ಸುತ್ತ ಹಾಕುತ್ತಿರುವುದೂ ಮತ್ತೊಂದು ಸಮಸ್ಯೆಯಾಗಿದೆ. ಪ್ಲಾಸ್ಟಿಕ್, ಒಣಕಸ ಹಾಗೂ ತ್ಯಾಜ್ಯಗಳು ಪರಿವರ್ತಕಗಳ ಬಳಿ ರಾಶಿಯಾಗಿ ಬೀಳುತ್ತಿದ್ದು, ಕೆಲವೊಮ್ಮೆ ಕಿಡಿ ಹೊತ್ತಿ ಬೆಂಕಿ ಅವಘಡ ಸಂಭವಿಸುವ ಭೀತಿಯೂ ಇದೆ. ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪರಿವರ್ತಕಗಳ ಸುತ್ತ ಸ್ವಚ್ಛತೆ ಕಾಪಾಡದಿದ್ದರೆ ಸಾರ್ವಜನಿಕರ ಜೀವಕ್ಕೆ ಅಪಾಯ ತಪ್ಪದು’ ಎಂದು ಸ್ಥಳೀಯ ನಿವಾಸಿ ಯಲ್ಲಪ್ಪ ಆತಂಕ ವ್ಯಕ್ತಪಡಿಸುತ್ತಾರೆ.</p>.<p>ಆಜಾದ್ ನಗರ ಪ್ರದೇಶದಲ್ಲಿ ಪೌರ ಕಾರ್ಮಿಕರು ಕಸ ತೆರವುಗೊಳಿಸಲು ತೆರಳುವಾಗಲೂ ಜೀವಭಯದಲ್ಲೇ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ವಿದ್ಯುತ್ ಕಂಬಗಳ ಅಕ್ಕಪಕ್ಕದಲ್ಲೇ ಕಸ ರಾಶಿಯಾಗಿರುವುದರಿಂದ ಸ್ವಚ್ಛತಾ ಸಿಬ್ಬಂದಿಗೂ ಅಪಾಯ ಎದುರಾಗುತ್ತಿದೆ. ಜಾಗೃತಿ ಮೂಡಿಸಿದರೂ ಪ್ರಯೋಜನವಾಗಿಲ್ಲ ಎಂದು ಪೌರ ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<p>ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ವಾಹನ ಸಂಚಾರದ ನಡುವೆ ಹಳೆ ವಿದ್ಯುತ್ ಪರಿವರ್ತಕಗಳ ನಿರ್ವಹಣೆಯೂ ಸಮರ್ಪಕವಾಗಿ ನಡೆ ಯುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಹಲವೆಡೆ ಪರಿವರ್ತಕಗಳ ಕೆಳಭಾಗದಲ್ಲಿ ಕಳೆ ಬೆಳೆದಿದೆ. ಅನಾಹುತ ಸಂಭವಿಸುವ ಮುನ್ನವೇ ಜೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡು ಎಲ್ಲ ಪರಿವರ್ತಕಗಳ ಸುತ್ತ ತಂತಿ ಬೇಲಿ ಅಳವಡಿಸಬೇಕು. ಎಚ್ಚರಿಕೆ ಫಲಕ ಹಾಕಬೇಕು ಹಾಗೂ ಅಪಾಯಕಾರಿ ಸ್ಥಿತಿಯಲ್ಲಿರುವ ಕಂಬ ಮತ್ತು ತಂತಿಗಳನ್ನು ತಕ್ಷಣ ದುರಸ್ತಿ ಮಾಡಬೇಕು ಎಂದು ಸ್ಥಳೀಯ ನಿವಾಸಿ ಶೇಖರಪ್ಪ ಆಗ್ರಹಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260512-32-1105013319</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>