<p>ರಾಯಚೂರು: ‘ನಗರದ ಗಂಜ್ ವೃತ್ತ ಸಮೀಪದ 89 ವರ್ಷಗಳ ಇತಿಹಾಸ ಹೊಂದಿರುವ ಗೋಶಾಲೆಗೆ ಸೇರಿದ 4 ಎಕರೆ 6 ಗುಂಟೆ ಭೂಮಿಯನ್ನು ಕಬಳಿಸುವ ಯತ್ನಕ್ಕೆ ಜಿಲ್ಲಾಧಿಕಾರಿ ನಿತೀಶ್ ಕೆ. ತಡೆ ಹಾಕಿದ್ದಾರೆ. ಅಂದಿನ ಉಪವಿಭಾಗಾಧಿಕಾರಿ ನೀಡಿದ್ದ ಆದೇಶವನ್ನು ರದ್ದುಪಡಿಸಿ, ಭೂಮಿಯನ್ನು ಗೋಶಾಲೆ ಹೆಸರಿಗೆ ಮರು ನೋಂದಾಯಿಸಲು ಆದೇಶಿಸಿದ್ದಾರೆ’ ಎಂದು ಗೋಶಾಲಾ ಸಮಿತಿಯ ಮುಖಂಡ ಎಂ. ವಿರೂಪಾಕ್ಷಿ ತಿಳಿಸಿದರು.</p>.<p>‘ಕಳೆದ ಎರಡೂವರೆ ವರ್ಷಗಳಿಂದ ಗೋಶಾಲೆ ಭೂಮಿ ಉಳಿಸಲು ನಡೆಸಿದ ಹೋರಾಟಕ್ಕೆ ನ್ಯಾಯ ದೊರೆತಿದೆ. ಗೋಪಾಲಸಿಂಗ್ ಎಂಬುವರು ಭೂಮಿ ಕಬಳಿಸಲು ಯತ್ನಿಸಿದ್ದರು. 2023ರಲ್ಲಿ ಅಂದಿನ ಎಸಿ ರಜನಿಕಾಂತ್ ಚೌಹಾನ್ ಅವರು ಅವರ ಪರವಾಗಿ ಆದೇಶ ನೀಡಿದ್ದರು’ ಎಂದು ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಆರೋಪಿಸಿದರು.</p>.<p>ಡಿಸಿ ನಿತೀಶ್ ಕೆ. ಈ ಆದೇಶವನ್ನು ರದ್ದುಪಡಿಸಿ, ತಹಶೀಲ್ದಾರ್ಗೆ ಸೂಚಿಸಿ ಗೋಶಾಲೆ ಪಹಣಿಯಲ್ಲಿ ‘6-6’ ಎಂದು ನಮೂದಿಸಿ ಎರಡು ದಿನಗಳಲ್ಲಿ ನೋಂದಣಿ ಪೂರ್ಣಗೊಳಿಸಲು ನಿರ್ದೇಶನ ನೀಡಿದ್ದಾರೆ’ ಎಂದರು.</p>.<p>‘ಈ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಶೋರೂಂ ಮತ್ತು ವಾಣಿಜ್ಯ ಮಳಿಗೆಗಳನ್ನು ಮಹಾನಗರ ಪಾಲಿಕೆ ತಕ್ಷಣ ತೆರವುಗೊಳಿಸಬೇಕು. ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಈ ಬಗ್ಗೆ 80 ವರ್ಷಗಳ ದಾಖಲೆಗಳೊಂದಿಗೆ 7-8 ಬಾರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೆವು’ ಎಂದು ತಿಳಿಸಿದರು.</p>.<p>ಈ ಹಿಂದೆ ಇದರಲ್ಲಿ ಭಾಗಿಯಾದ ಉಪವಿಭಾಗಾಧಿಕಾರಿ ರಜನಿಕಾಂತ್ ಚೌಹಾನ್ ಅವರ ಮೇಲೆ ಎಫ್ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.</p>.<p>‘ಮಲಿಯಾಬಾದ್ ಗೋಶಾಲೆ ಭೂಮಿಯಲ್ಲೂ ಅಕ್ರಮ ನಡೆಯುತ್ತಿದೆ. ನಿಜಾಮರ ಕಾಲದಲ್ಲಿ ಗೋಶಾಲೆಗೆ 1,060 ಎಕರೆ ಮೀಸಲಿತ್ತು. ಆದರೆ ಈಗ 350ರಿಂದ 400 ಎಕರೆ ಭೂಮಿ ಕಬಳಿಕೆಯಾಗಿದೆ. ಅಲ್ಲಿ ಅನಧಿಕೃತ ಸ್ಟೋನ್ ಕ್ರಷರ್ಗಳು ಕಾರ್ಯನಿರ್ವಹಿಸುತ್ತಿವೆ. ಗೋಶಾಲೆ ಭೂಮಿ ಉಳಿವಿಗೆ ಹೋರಾಟ ಮುಂದುವರಿಯಲಿದೆ’ ಎಂದು ಹೇಳಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ನರಸಪ್ಪ ಆಸ್ಕಿಹಾಳ್, ರಾಜೇಂದ್ರ ಕುಮಾರ, ಕಿಶೋರ ಜೈನ್, ಪ್ರದೀಪ ಜೈನ್, ರಾಜು ಇತರರು ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260410-32-1894619399</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಯಚೂರು: ‘ನಗರದ ಗಂಜ್ ವೃತ್ತ ಸಮೀಪದ 89 ವರ್ಷಗಳ ಇತಿಹಾಸ ಹೊಂದಿರುವ ಗೋಶಾಲೆಗೆ ಸೇರಿದ 4 ಎಕರೆ 6 ಗುಂಟೆ ಭೂಮಿಯನ್ನು ಕಬಳಿಸುವ ಯತ್ನಕ್ಕೆ ಜಿಲ್ಲಾಧಿಕಾರಿ ನಿತೀಶ್ ಕೆ. ತಡೆ ಹಾಕಿದ್ದಾರೆ. ಅಂದಿನ ಉಪವಿಭಾಗಾಧಿಕಾರಿ ನೀಡಿದ್ದ ಆದೇಶವನ್ನು ರದ್ದುಪಡಿಸಿ, ಭೂಮಿಯನ್ನು ಗೋಶಾಲೆ ಹೆಸರಿಗೆ ಮರು ನೋಂದಾಯಿಸಲು ಆದೇಶಿಸಿದ್ದಾರೆ’ ಎಂದು ಗೋಶಾಲಾ ಸಮಿತಿಯ ಮುಖಂಡ ಎಂ. ವಿರೂಪಾಕ್ಷಿ ತಿಳಿಸಿದರು.</p>.<p>‘ಕಳೆದ ಎರಡೂವರೆ ವರ್ಷಗಳಿಂದ ಗೋಶಾಲೆ ಭೂಮಿ ಉಳಿಸಲು ನಡೆಸಿದ ಹೋರಾಟಕ್ಕೆ ನ್ಯಾಯ ದೊರೆತಿದೆ. ಗೋಪಾಲಸಿಂಗ್ ಎಂಬುವರು ಭೂಮಿ ಕಬಳಿಸಲು ಯತ್ನಿಸಿದ್ದರು. 2023ರಲ್ಲಿ ಅಂದಿನ ಎಸಿ ರಜನಿಕಾಂತ್ ಚೌಹಾನ್ ಅವರು ಅವರ ಪರವಾಗಿ ಆದೇಶ ನೀಡಿದ್ದರು’ ಎಂದು ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಆರೋಪಿಸಿದರು.</p>.<p>ಡಿಸಿ ನಿತೀಶ್ ಕೆ. ಈ ಆದೇಶವನ್ನು ರದ್ದುಪಡಿಸಿ, ತಹಶೀಲ್ದಾರ್ಗೆ ಸೂಚಿಸಿ ಗೋಶಾಲೆ ಪಹಣಿಯಲ್ಲಿ ‘6-6’ ಎಂದು ನಮೂದಿಸಿ ಎರಡು ದಿನಗಳಲ್ಲಿ ನೋಂದಣಿ ಪೂರ್ಣಗೊಳಿಸಲು ನಿರ್ದೇಶನ ನೀಡಿದ್ದಾರೆ’ ಎಂದರು.</p>.<p>‘ಈ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಶೋರೂಂ ಮತ್ತು ವಾಣಿಜ್ಯ ಮಳಿಗೆಗಳನ್ನು ಮಹಾನಗರ ಪಾಲಿಕೆ ತಕ್ಷಣ ತೆರವುಗೊಳಿಸಬೇಕು. ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಈ ಬಗ್ಗೆ 80 ವರ್ಷಗಳ ದಾಖಲೆಗಳೊಂದಿಗೆ 7-8 ಬಾರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೆವು’ ಎಂದು ತಿಳಿಸಿದರು.</p>.<p>ಈ ಹಿಂದೆ ಇದರಲ್ಲಿ ಭಾಗಿಯಾದ ಉಪವಿಭಾಗಾಧಿಕಾರಿ ರಜನಿಕಾಂತ್ ಚೌಹಾನ್ ಅವರ ಮೇಲೆ ಎಫ್ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.</p>.<p>‘ಮಲಿಯಾಬಾದ್ ಗೋಶಾಲೆ ಭೂಮಿಯಲ್ಲೂ ಅಕ್ರಮ ನಡೆಯುತ್ತಿದೆ. ನಿಜಾಮರ ಕಾಲದಲ್ಲಿ ಗೋಶಾಲೆಗೆ 1,060 ಎಕರೆ ಮೀಸಲಿತ್ತು. ಆದರೆ ಈಗ 350ರಿಂದ 400 ಎಕರೆ ಭೂಮಿ ಕಬಳಿಕೆಯಾಗಿದೆ. ಅಲ್ಲಿ ಅನಧಿಕೃತ ಸ್ಟೋನ್ ಕ್ರಷರ್ಗಳು ಕಾರ್ಯನಿರ್ವಹಿಸುತ್ತಿವೆ. ಗೋಶಾಲೆ ಭೂಮಿ ಉಳಿವಿಗೆ ಹೋರಾಟ ಮುಂದುವರಿಯಲಿದೆ’ ಎಂದು ಹೇಳಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ನರಸಪ್ಪ ಆಸ್ಕಿಹಾಳ್, ರಾಜೇಂದ್ರ ಕುಮಾರ, ಕಿಶೋರ ಜೈನ್, ಪ್ರದೀಪ ಜೈನ್, ರಾಜು ಇತರರು ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260410-32-1894619399</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>