<p>ಜಾಲಹಳ್ಳಿ: ‘ಕೆಕೆಆರ್ಟಿಸಿಗೆ ಸೇರಿದ ಬಹುತೇಕ ಬಸ್ಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ’ ಎಂದು ಪ್ರಯಾಣಿಕ ಸುರೇಶ ಯಲಗಟ್ಟಿ ಅರೋಪಿಸಿದ್ದಾರೆ.</p>.<p>ದೇವದುರ್ಗ ಬಸ್ ಘಟಕದಿಂದ ನಿತ್ಯ ಹಟ್ಟಿ ಚಿನ್ನದ ಗಣಿ-ದೇವದುರ್ಗ ಹಾಗೂ ದೇವದುರ್ಗ- ಶಹಾಪುರ, ರಾಯಚೂರು-ದೇವದುರ್ಗ ಮಾರ್ಗವಾಗಿ ಸಂಚರಿಸುವ ಬಸ್ಗಳ ಆಸನಗಳ ಮೇಲೆ ಮಣ್ಣು ಹಾಗೂ ದೂಳು ಮೆತ್ತಿಕೊಂಡಿರುತ್ತದೆ. ವೃದ್ಧರು, ಮಕ್ಕಳು ಹಾಗೂ ಉಸಿರಾಟದ ತೊಂ ದರೆ ಇರುವವರು ಸಂಚರಿಸುವುದೇ ಸವಾಲಾಗಿದೆ’ ಎಂದು ದೂರಿದ್ದಾರೆ.</p>.<p>ದೇವದುರ್ಗ ಬಸ್ ಘಟಕದ ವ್ಯವಸ್ಥಾಪಕ ರಾಮನಗೌಡ ಮಾತನಾಡಿ,‘ಬಸ್ಗಳ ಸ್ವಚ್ಛತೆಗೆ ನಾಲ್ಕು ಜನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಿತ್ಯ ಬಸ್ಗಳು ಹೊರಗೆ ಹೋಗುವ ಮುಂಚೆ ಸ್ವಚ್ಛ ಮಾಡಲಾಗುತ್ತದೆ. ಪ್ರಯಾಣಿಕರು ಬಸ್ನಲ್ಲಿಯೇ ತಿಂಡಿ–ತಿನಿಸು ತಿಂದು ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯ ಅಲ್ಲಿಯೇ ಹಾಕುವುದರಿಂದ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ’ ಎಂದು ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260418-32-733584272</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜಾಲಹಳ್ಳಿ: ‘ಕೆಕೆಆರ್ಟಿಸಿಗೆ ಸೇರಿದ ಬಹುತೇಕ ಬಸ್ಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ’ ಎಂದು ಪ್ರಯಾಣಿಕ ಸುರೇಶ ಯಲಗಟ್ಟಿ ಅರೋಪಿಸಿದ್ದಾರೆ.</p>.<p>ದೇವದುರ್ಗ ಬಸ್ ಘಟಕದಿಂದ ನಿತ್ಯ ಹಟ್ಟಿ ಚಿನ್ನದ ಗಣಿ-ದೇವದುರ್ಗ ಹಾಗೂ ದೇವದುರ್ಗ- ಶಹಾಪುರ, ರಾಯಚೂರು-ದೇವದುರ್ಗ ಮಾರ್ಗವಾಗಿ ಸಂಚರಿಸುವ ಬಸ್ಗಳ ಆಸನಗಳ ಮೇಲೆ ಮಣ್ಣು ಹಾಗೂ ದೂಳು ಮೆತ್ತಿಕೊಂಡಿರುತ್ತದೆ. ವೃದ್ಧರು, ಮಕ್ಕಳು ಹಾಗೂ ಉಸಿರಾಟದ ತೊಂ ದರೆ ಇರುವವರು ಸಂಚರಿಸುವುದೇ ಸವಾಲಾಗಿದೆ’ ಎಂದು ದೂರಿದ್ದಾರೆ.</p>.<p>ದೇವದುರ್ಗ ಬಸ್ ಘಟಕದ ವ್ಯವಸ್ಥಾಪಕ ರಾಮನಗೌಡ ಮಾತನಾಡಿ,‘ಬಸ್ಗಳ ಸ್ವಚ್ಛತೆಗೆ ನಾಲ್ಕು ಜನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಿತ್ಯ ಬಸ್ಗಳು ಹೊರಗೆ ಹೋಗುವ ಮುಂಚೆ ಸ್ವಚ್ಛ ಮಾಡಲಾಗುತ್ತದೆ. ಪ್ರಯಾಣಿಕರು ಬಸ್ನಲ್ಲಿಯೇ ತಿಂಡಿ–ತಿನಿಸು ತಿಂದು ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯ ಅಲ್ಲಿಯೇ ಹಾಕುವುದರಿಂದ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ’ ಎಂದು ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260418-32-733584272</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>