<p><strong>ಹಟ್ಟಿ ಚಿನ್ನದ ಗಣಿ (ರಾಯಚೂರು):</strong> ಸಮೀಪದ ರೋಡಲಬಂಡದಲ್ಲಿ (ತವಗ) ನರೇಗಾ ಕಾರ್ಮಿಕರನ್ನು ಮಳೆ ನೀರು ತುಂಬಿರುವ ಕೆರೆಯ ಮಧ್ಯದಲ್ಲೇ ನಿಲ್ಲಿಸಿ ಜಿಪಿಎಸ್ ಫೋಟೊ ತೆಗೆದು ಇ–ಹಾಜರಾತಿ ಪಡೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.</p>.<p>‘ಕೆರೆಯಲ್ಲಿ 5 ಅಡಿಗಿಂತ ಹೆಚ್ಚು ನೀರಿತ್ತು. ಹೀಗಿದ್ದರೂ ನರೇಗಾ ಸಿಬ್ಬಂದಿ ನಮ್ಮನ್ನು ಕೆರೆಯ ಮಧ್ಯದಲ್ಲಿ ನಿಲ್ಲಿಸಿ, ಫೋಟೊ ತೆಗೆದುಕೊಂಡಿದ್ದಾರೆ’ ಎಂದು ಕಾರ್ಮಿಕರು ದೂರಿದ್ದಾರೆ.</p>.<p>‘ರೋಡಲಬಂಡದಲ್ಲಿ ನರೇಗಾದಡಿ ಕೆರೆ ಕಾಮಗಾರಿ ಕೈಗೊಳ್ಳಲಾಗಿತ್ತು. ಕಾಮಗಾರಿಯಲ್ಲಿ ಕೆಲಸ ಮಾಡಿದ್ದೆವು. ಆಗ ಜಿಪಿಎಸ್ ಫೋಟೊ ತೆಗೆದುಕೊಂಡಿರಲಿಲ್ಲ’ ಎಂದಿದ್ದಾರೆ.</p>.<p>‘ಫೋಟೊ ತೆಗೆಯಿಸಿಕೊಳ್ಳಲು ಒಪ್ಪದಿದ್ದರೆ, ಕೂಲಿ ನೀಡುವುದಿಲ್ಲ ಎಂದು ಹೆದರಿಸಿದರು. ಹೀಗಾಗಿ ಫೋಟೊ ತೆಗೆಸಿಕೊಂಡಿದ್ದೇವೆ’ ಎಂದಿದ್ದಾರೆ.</p>.<p>‘ಕಾರ್ಮಿಕರನ್ನು ಕೆರೆಯಲ್ಲಿ ನಿಲ್ಲಿಸಿ, ಫೋಟೊ ತೆಗೆದುಕೊಂಡಿರುವ ಬಗ್ಗೆ ದೂರುಗಳಿವೆ. ಮಾಹಿತಿ ಪಡೆದು, ಕ್ರಮ ಕೈಗೊಳ್ಳಲಾಗುವುದು’ ಎಂದು ಲಿಂಗಸುಗೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಟ್ಟಿ ಚಿನ್ನದ ಗಣಿ (ರಾಯಚೂರು):</strong> ಸಮೀಪದ ರೋಡಲಬಂಡದಲ್ಲಿ (ತವಗ) ನರೇಗಾ ಕಾರ್ಮಿಕರನ್ನು ಮಳೆ ನೀರು ತುಂಬಿರುವ ಕೆರೆಯ ಮಧ್ಯದಲ್ಲೇ ನಿಲ್ಲಿಸಿ ಜಿಪಿಎಸ್ ಫೋಟೊ ತೆಗೆದು ಇ–ಹಾಜರಾತಿ ಪಡೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.</p>.<p>‘ಕೆರೆಯಲ್ಲಿ 5 ಅಡಿಗಿಂತ ಹೆಚ್ಚು ನೀರಿತ್ತು. ಹೀಗಿದ್ದರೂ ನರೇಗಾ ಸಿಬ್ಬಂದಿ ನಮ್ಮನ್ನು ಕೆರೆಯ ಮಧ್ಯದಲ್ಲಿ ನಿಲ್ಲಿಸಿ, ಫೋಟೊ ತೆಗೆದುಕೊಂಡಿದ್ದಾರೆ’ ಎಂದು ಕಾರ್ಮಿಕರು ದೂರಿದ್ದಾರೆ.</p>.<p>‘ರೋಡಲಬಂಡದಲ್ಲಿ ನರೇಗಾದಡಿ ಕೆರೆ ಕಾಮಗಾರಿ ಕೈಗೊಳ್ಳಲಾಗಿತ್ತು. ಕಾಮಗಾರಿಯಲ್ಲಿ ಕೆಲಸ ಮಾಡಿದ್ದೆವು. ಆಗ ಜಿಪಿಎಸ್ ಫೋಟೊ ತೆಗೆದುಕೊಂಡಿರಲಿಲ್ಲ’ ಎಂದಿದ್ದಾರೆ.</p>.<p>‘ಫೋಟೊ ತೆಗೆಯಿಸಿಕೊಳ್ಳಲು ಒಪ್ಪದಿದ್ದರೆ, ಕೂಲಿ ನೀಡುವುದಿಲ್ಲ ಎಂದು ಹೆದರಿಸಿದರು. ಹೀಗಾಗಿ ಫೋಟೊ ತೆಗೆಸಿಕೊಂಡಿದ್ದೇವೆ’ ಎಂದಿದ್ದಾರೆ.</p>.<p>‘ಕಾರ್ಮಿಕರನ್ನು ಕೆರೆಯಲ್ಲಿ ನಿಲ್ಲಿಸಿ, ಫೋಟೊ ತೆಗೆದುಕೊಂಡಿರುವ ಬಗ್ಗೆ ದೂರುಗಳಿವೆ. ಮಾಹಿತಿ ಪಡೆದು, ಕ್ರಮ ಕೈಗೊಳ್ಳಲಾಗುವುದು’ ಎಂದು ಲಿಂಗಸುಗೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>