ರಾಯಚೂರಿನ ಪಾರಸವಾಟಿಕಾ ಕಾಲೋನಿ ಬಯಲಿನ ತ್ಯಾಜ್ಯರಾಶಿಯಲ್ಲಿ ಬಿದ್ದಿದ್ದ ಬ್ಯಾರೆಲ್ ಎತ್ತಿ ಅಲ್ಲಾಡಿಸಿದಾಗ ಸ್ಫೋಟ ಸಂಭವಿಸಿ ಸ್ಥಳದಲ್ಲೆ ಮಹಿಳೆ ಮೃತಪಟ್ಟು, ಮಹಿಳೆಯ ಪತಿ ಗಾಯಗೊಂಡಿದ್ದ ಘಟನೆ 2018 ರ ಅಕ್ಟೋಬರ್ನಲ್ಲಿ ನಡೆದಿತ್ತು. ಕಲಬುರ್ಗಿಯ ಎಫ್ಎಸ್ಎಲ್ ತಂಡವು ಸ್ಥಳಕ್ಕೆ ಬಂದು ಸ್ಯಾಂಪಲ್ಗಳನ್ನು ಸಂಗ್ರಹಿಸಿಕೊಂಡು ಹೋಗಿದ್ದರು. ಅಲ್ಲಿಂದ ಬೆಂಗಳೂರಿಗೆ ಲ್ಯಾಬ್ಗೆ ಸ್ಯಾಂಪಲ್ಗಳನ್ನು ಕಳುಹಿಸಲಾಗಿತ್ತು.