<p><strong>ಸಿಂಧನೂರು:</strong> ತಾಲ್ಲೂಕಿನಲ್ಲಿ ತುಂಗಭದ್ರಾ ನದಿ ಹರಿದಿದ್ದರೂ ಬಹಳಷ್ಟು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಜನಸಾಮಾನ್ಯರು ಪಡಿಪಾಟಲು ಪಡುತ್ತಿದ್ದಾರೆ.</p>.<p>ಕುಡಿಯುವ ನೀರಿನ ಯೋಜನೆಗಳ ಅಸಮರ್ಪಕ ಅನುಷ್ಠಾನ, ಕೆಟ್ಟು ಹೋದ ಶುದ್ಧೀಕರಣ ಘಟಕಗಳಿಂದಾಗಿ ಜನರು ಅಶುದ್ಧ ನೀರನ್ನೇ ಕುಡಿಯುತ್ತಿದ್ದು, ಅನಾರೋಗ್ಯ ಸಮಸ್ಯೆಯಿಂದ ಬಳಲುವಂತಾಗಿದೆ. ತಾಲ್ಲೂಕಿನಲ್ಲಿ 155 ಕುಡಿಯುವ ನೀರಿನ ಕೆರೆಗಳಿದ್ದು, ಕಳೆದ ತಿಂಗಳು ಎಡದಂಡೆ ಕಾಲುವೆಗೆ ಕುಡಿಯುವ ಉದ್ದೇಶಕ್ಕಾಗಿ ನೀರು ಹರಿಸಿದ್ದು, ಕೆರೆಗಳನ್ನು ಸ್ವಚ್ಛ ಮಾಡದೆ ನೀರು ತುಂಬಿಸಿರುವುದರಿಂದ ಗ್ರಾಮಸ್ಥರು ತೊಂದರೆ ಅನುಭವಿಸಬೇಕಾಗಿದೆ ಎನ್ನುತ್ತಾರೆ ರೈತ ಮುಖಂಡ ಶರಣಪ್ಪ ಸುಲ್ತಾನಪುರ.</p>.<p>ನಾಲೆಯಿಂದ ಕೆರೆಯಲ್ಲಿ ನೀರು ಸಂಗ್ರಹಿಸಿದ ನಂತರ ಉಸುಕಿನ ಶುದ್ಧೀಕರಣ ವ್ಯವಸ್ಥೆಗೊಳಪಡಿಸಿ, ಒಎಚ್ಟಿ ಇಲ್ಲವೆ, ದೊಡ್ಡ ಸಂಪುಗಳಲ್ಲಿ ಸಂಗ್ರಹಿಸಬೇಕು. 50 ಸಾವಿರ ಲೀಟರ್ ನೀರಿಗೆ ಅಂದಾಜು 300 ಗ್ರಾಂ ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡಿ, ನೀರು ಸರಬರಾಜು ಮಾಡಬೇಕು. ಆದರೆ, ಬಹಳಷ್ಟು ಕಡೆ ಒಎಚ್ಟಿ, ಸಂಪು ಹಾಗೂ ಉಸುಕಿನ ಶುದ್ಧೀಕರಣ ವ್ಯವಸ್ಥೆ ಇಲ್ಲದೆ, ಹಾಗೆಯೇ ಪೂರೈಕೆ ಮಾಡುತ್ತಿರುವುದರಿಂದ ಗ್ರಾಮೀಣ ಪ್ರದೇಶದ ಜನರು ಒಂದಿಲ್ಲೊಂದು ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಅಶುದ್ಧ ನೀರು ಕುಡಿದ ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ವೃದ್ಧರು ತೊಂದರೆಗೀಡಾಗುವಂತಾಗಿದೆ ಎನ್ನುತ್ತಾರೆ ಗ್ರಾಮಸ್ಥರು.</p>.<p>‘ನಮ್ಮ ಕ್ಯಾಂಪ್ನ ಕೆರೆಯ ನೀರು ದುರ್ವಾಸನೆಯಿಂದ ಕೂಡಿದೆ. ಇದೇ ನೀರನ್ನೇ ಜನರು ಕುಡಿಯುತ್ತಾರೆ. ವಾರಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಮೋಟಾರ್ ಇಲ್ಲದವರಿಗೆ ನೀರು ಸಿಗುವುದಿಲ್ಲ. ಅರ್ಧ ತಾಸು ಮಾತ್ರ ನೀರು ಬಿಡುತ್ತಿರುವುದರಿಂದ, ವಾಸನೆಯುಕ್ತ ನೀರು ತುಂಬಿಕೊಳ್ಳಬೇಕೆಂದರೂ ಲಭ್ಯವಾಗುವುದಿಲ್ಲ. ಶುದ್ಧೀಕರಣ ಘಟಕದಲ್ಲೂ ನೀರು ಸಮಪರ್ಕವಾಗಿ ಶುದ್ಧೀಕರಣವಾಗುತ್ತಿಲ್ಲ. ಶುದ್ಧೀಕರಣ ಪ್ರಕ್ರಿಯೆಗೆ ಒಳಪಡಿಸಿದ ನಂತರವೂ ದುರ್ವಾಸನೆ ಬರುತ್ತಿದೆ. ಅದು ಹೇಗೆ ಶುದ್ಧೀಕರಣವಾಗುತ್ತದೆಯೋ ದೇವರೇ ಬಲ್ಲ; ಅನಿವಾರ್ಯವಾಗಿ ಕಲುಷಿತ ನೀರು ಕುಡಿಯುವುದರಿಂದ ವಾಂತಿಭೇದಿ ಆಗುವ ಆತಂಕ ಕಾಡುತ್ತಿದೆ’ ಎಂದು ಆರ್.ಎಚ್.ಕ್ಯಾಂಪ್–5ರ ಮನೋಜಿತ್ ಬಿಸ್ವಾಸ್, ಪ್ರಹ್ಲಾದ್ ಬಿಸ್ವಾಸ್, ಅಭಿಷೇಕ್ ರಫ್ತಾನ್, ಕಲ್ಯಾಣ ಮಂಡಲ, ಮಾಧವಿ, ಸುಧಾ ಹಾಗೂ ರತ್ನಮಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ತಾಲ್ಲೂಕಿನ ರಾಮರೆಡ್ಡಿ ಕ್ಯಾಂಪಿನಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಕೈಗೊಳ್ಳಲಾಗಿದ್ದು, ನೀರಿನ ಟ್ಯಾಂಕ್ ಇದೆ. ಪೈಪ್ಲೈನ್ ಅಳವಡಿಕೆ ಅರ್ಧಂಬರ್ಧ ಮಾಡಿದ್ದರಿಂದ ನೀರಿನ ಪೂರೈಕೆಯಿಲ್ಲ ಎನ್ನುತ್ತಾರೆ ರಾಮರೆಡ್ಡಿಕ್ಯಾಂಪ್ನ ಕೆ.ಮಲ್ಲಿಕಾರ್ಜುನ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಪಗಡದಿನ್ನಿ ಗ್ರಾಮದ ಬಳಿ ಬೃಹತ್ ಕೆರೆ ನಿರ್ಮಿಸಿ, ಪಗಡದಿನ್ನಿ ಹಾಗೂ ಬೂತಲದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 10 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು. ಮುಂದಿನ ವರ್ಷದೊಳಗೆ ಎರಡೂ ಪಂಚಾಯಿತಿಯ ಜನರ ನೀರಿನ ಸಮಸ್ಯೆ ನಿವಾರಿಸಲಾಗುವುದು. ಆರ್.ಎಚ್.ಕ್ಯಾಂಪ್–5ರ ಕೆರೆ ನೀರನ್ನು ಪರೀಕ್ಷೆಗೊಳಪಡಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಾ.ಪಂ ಇಒ ಚಂದ್ರಶೇಖರ ಹೇಳಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260516-32-666082903</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂಧನೂರು:</strong> ತಾಲ್ಲೂಕಿನಲ್ಲಿ ತುಂಗಭದ್ರಾ ನದಿ ಹರಿದಿದ್ದರೂ ಬಹಳಷ್ಟು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಜನಸಾಮಾನ್ಯರು ಪಡಿಪಾಟಲು ಪಡುತ್ತಿದ್ದಾರೆ.</p>.<p>ಕುಡಿಯುವ ನೀರಿನ ಯೋಜನೆಗಳ ಅಸಮರ್ಪಕ ಅನುಷ್ಠಾನ, ಕೆಟ್ಟು ಹೋದ ಶುದ್ಧೀಕರಣ ಘಟಕಗಳಿಂದಾಗಿ ಜನರು ಅಶುದ್ಧ ನೀರನ್ನೇ ಕುಡಿಯುತ್ತಿದ್ದು, ಅನಾರೋಗ್ಯ ಸಮಸ್ಯೆಯಿಂದ ಬಳಲುವಂತಾಗಿದೆ. ತಾಲ್ಲೂಕಿನಲ್ಲಿ 155 ಕುಡಿಯುವ ನೀರಿನ ಕೆರೆಗಳಿದ್ದು, ಕಳೆದ ತಿಂಗಳು ಎಡದಂಡೆ ಕಾಲುವೆಗೆ ಕುಡಿಯುವ ಉದ್ದೇಶಕ್ಕಾಗಿ ನೀರು ಹರಿಸಿದ್ದು, ಕೆರೆಗಳನ್ನು ಸ್ವಚ್ಛ ಮಾಡದೆ ನೀರು ತುಂಬಿಸಿರುವುದರಿಂದ ಗ್ರಾಮಸ್ಥರು ತೊಂದರೆ ಅನುಭವಿಸಬೇಕಾಗಿದೆ ಎನ್ನುತ್ತಾರೆ ರೈತ ಮುಖಂಡ ಶರಣಪ್ಪ ಸುಲ್ತಾನಪುರ.</p>.<p>ನಾಲೆಯಿಂದ ಕೆರೆಯಲ್ಲಿ ನೀರು ಸಂಗ್ರಹಿಸಿದ ನಂತರ ಉಸುಕಿನ ಶುದ್ಧೀಕರಣ ವ್ಯವಸ್ಥೆಗೊಳಪಡಿಸಿ, ಒಎಚ್ಟಿ ಇಲ್ಲವೆ, ದೊಡ್ಡ ಸಂಪುಗಳಲ್ಲಿ ಸಂಗ್ರಹಿಸಬೇಕು. 50 ಸಾವಿರ ಲೀಟರ್ ನೀರಿಗೆ ಅಂದಾಜು 300 ಗ್ರಾಂ ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡಿ, ನೀರು ಸರಬರಾಜು ಮಾಡಬೇಕು. ಆದರೆ, ಬಹಳಷ್ಟು ಕಡೆ ಒಎಚ್ಟಿ, ಸಂಪು ಹಾಗೂ ಉಸುಕಿನ ಶುದ್ಧೀಕರಣ ವ್ಯವಸ್ಥೆ ಇಲ್ಲದೆ, ಹಾಗೆಯೇ ಪೂರೈಕೆ ಮಾಡುತ್ತಿರುವುದರಿಂದ ಗ್ರಾಮೀಣ ಪ್ರದೇಶದ ಜನರು ಒಂದಿಲ್ಲೊಂದು ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಅಶುದ್ಧ ನೀರು ಕುಡಿದ ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ವೃದ್ಧರು ತೊಂದರೆಗೀಡಾಗುವಂತಾಗಿದೆ ಎನ್ನುತ್ತಾರೆ ಗ್ರಾಮಸ್ಥರು.</p>.<p>‘ನಮ್ಮ ಕ್ಯಾಂಪ್ನ ಕೆರೆಯ ನೀರು ದುರ್ವಾಸನೆಯಿಂದ ಕೂಡಿದೆ. ಇದೇ ನೀರನ್ನೇ ಜನರು ಕುಡಿಯುತ್ತಾರೆ. ವಾರಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಮೋಟಾರ್ ಇಲ್ಲದವರಿಗೆ ನೀರು ಸಿಗುವುದಿಲ್ಲ. ಅರ್ಧ ತಾಸು ಮಾತ್ರ ನೀರು ಬಿಡುತ್ತಿರುವುದರಿಂದ, ವಾಸನೆಯುಕ್ತ ನೀರು ತುಂಬಿಕೊಳ್ಳಬೇಕೆಂದರೂ ಲಭ್ಯವಾಗುವುದಿಲ್ಲ. ಶುದ್ಧೀಕರಣ ಘಟಕದಲ್ಲೂ ನೀರು ಸಮಪರ್ಕವಾಗಿ ಶುದ್ಧೀಕರಣವಾಗುತ್ತಿಲ್ಲ. ಶುದ್ಧೀಕರಣ ಪ್ರಕ್ರಿಯೆಗೆ ಒಳಪಡಿಸಿದ ನಂತರವೂ ದುರ್ವಾಸನೆ ಬರುತ್ತಿದೆ. ಅದು ಹೇಗೆ ಶುದ್ಧೀಕರಣವಾಗುತ್ತದೆಯೋ ದೇವರೇ ಬಲ್ಲ; ಅನಿವಾರ್ಯವಾಗಿ ಕಲುಷಿತ ನೀರು ಕುಡಿಯುವುದರಿಂದ ವಾಂತಿಭೇದಿ ಆಗುವ ಆತಂಕ ಕಾಡುತ್ತಿದೆ’ ಎಂದು ಆರ್.ಎಚ್.ಕ್ಯಾಂಪ್–5ರ ಮನೋಜಿತ್ ಬಿಸ್ವಾಸ್, ಪ್ರಹ್ಲಾದ್ ಬಿಸ್ವಾಸ್, ಅಭಿಷೇಕ್ ರಫ್ತಾನ್, ಕಲ್ಯಾಣ ಮಂಡಲ, ಮಾಧವಿ, ಸುಧಾ ಹಾಗೂ ರತ್ನಮಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ತಾಲ್ಲೂಕಿನ ರಾಮರೆಡ್ಡಿ ಕ್ಯಾಂಪಿನಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಕೈಗೊಳ್ಳಲಾಗಿದ್ದು, ನೀರಿನ ಟ್ಯಾಂಕ್ ಇದೆ. ಪೈಪ್ಲೈನ್ ಅಳವಡಿಕೆ ಅರ್ಧಂಬರ್ಧ ಮಾಡಿದ್ದರಿಂದ ನೀರಿನ ಪೂರೈಕೆಯಿಲ್ಲ ಎನ್ನುತ್ತಾರೆ ರಾಮರೆಡ್ಡಿಕ್ಯಾಂಪ್ನ ಕೆ.ಮಲ್ಲಿಕಾರ್ಜುನ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಪಗಡದಿನ್ನಿ ಗ್ರಾಮದ ಬಳಿ ಬೃಹತ್ ಕೆರೆ ನಿರ್ಮಿಸಿ, ಪಗಡದಿನ್ನಿ ಹಾಗೂ ಬೂತಲದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 10 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು. ಮುಂದಿನ ವರ್ಷದೊಳಗೆ ಎರಡೂ ಪಂಚಾಯಿತಿಯ ಜನರ ನೀರಿನ ಸಮಸ್ಯೆ ನಿವಾರಿಸಲಾಗುವುದು. ಆರ್.ಎಚ್.ಕ್ಯಾಂಪ್–5ರ ಕೆರೆ ನೀರನ್ನು ಪರೀಕ್ಷೆಗೊಳಪಡಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಾ.ಪಂ ಇಒ ಚಂದ್ರಶೇಖರ ಹೇಳಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260516-32-666082903</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>